Wednesday, August 12, 2026

BDA Apartments

Home Front Page ವನ್ಯಪ್ರಾಣಿಗಳಿಂದ ಉಂಟಾಗುವ ಹಸು ಪ್ರಾಣಹಾನಿಗೆ ಪರಿಹಾರ 75 ಸಾವಿರ ರೂ.ಗೆ ಹೆಚ್ಚಳ -ಸಚಿವ ಅರವಿಂದ ಲಿಂಬಾವಳಿ.

ವನ್ಯಪ್ರಾಣಿಗಳಿಂದ ಉಂಟಾಗುವ ಹಸು ಪ್ರಾಣಹಾನಿಗೆ ಪರಿಹಾರ 75 ಸಾವಿರ ರೂ.ಗೆ ಹೆಚ್ಚಳ -ಸಚಿವ ಅರವಿಂದ ಲಿಂಬಾವಳಿ.

ಬೆಂಗಳೂರು, ಏಪ್ರಿಲ್ 21.2021(www.justkannada.in):  ಮಾನವ ವನ್ಯಜೀವಿ ಸಂಘರ್ಷದಿಂದ  ಹಸು, ಎಮ್ಮೆ, ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು 10ಸಾವಿರ ದಿಂದ 75 ಸಾವಿರ ರೂಪಾಯಿ ಗಳಿಗೆ ಹೆಚ್ಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.jk

ಈ ಕುರಿತು ಮಾತನಾಡಿರುವ ಸಚಿವ ಅರವಿಂದ ಲಿಂಬಾವಳಿ, ಈ ಸಂಬಂಧ ನಿನ್ನೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ವನ್ಯಜೀವಿಗಳಿಂದ ಸಾಕು ಪ್ರಾಣಿಗಳ ಹತ್ಯೆ ಆದಲ್ಲಿ ತಕ್ಷಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 20 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡಲಾಗಿದೆ. ಆನಂತರ  ಸ್ಥಳೀಯ ಪಶುವೈದ್ಯಾಧಿಕಾರಿಗಳು ಸತ್ತ ಸಾಕುಪ್ರಾಣಿಯ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದ ನಂತರ  ಉಳಿದ ಮೊತ್ತ,( ಗರಿಷ್ಟ ರೂ 75000-00 ಮಿತಿಗೆ ಒಳಪಟ್ಟು ) ಪಾವತಿಸಬಹುದಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಇದರ ಜೊತೆ ಕುರಿ, ಮೇಕೆ,ಆಡು ಮೃತ ಪಟ್ಟಲ್ಲಿ ಈಗ ನೀಡುತ್ತಿರುವ ರೂ 5000 ಪರಿಹಾರಧನವನ್ನು ರೂ10 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.Rs 75,000 - cow- death compensation-Minister- Arvind Limbavali.

ಈ ಆದೇಶದ ಮೂಲಕ ಜನಪ್ರತಿನಿಧಿಗಳು, ರೈತರು ಮತ್ತು ಸಾರ್ವಜನಿಕರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿ ದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

Key words: Rs 75,000 – cow- death compensation-Minister- Arvind Limbavali.