ಮೈದಾನ ಸಿಬ್ಬಂದಿಗಳಿಗೆ ರೋಹಿತ್ ಶರ್ಮಾ ವಿಶೇಷ ಗಿಫ್ಟ್ !

ಬೆಂಗಳೂರು, ಸೆಪ್ಟೆಂಬರ್ 13, 2023 (www.justkannada.in): ಏಷ್ಯಾ ಕಪ್ ಪಂದ್ಯ ಸುಗಮವಾಗಿ ನಡೆಸಿಕೊಡಲು ಶ್ರಮಿಸಿದ ಮೈದಾನ ಸಿಬ್ಬಂದಿಗಳಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ಉಡುಗೊಡೆ ನೀಡಿದ್ದಾರೆ.

ಹೌದು. ಮಳೆಯ ನಡುವೆಯೂ ಮೈದಾನವನ್ನು ರಕ್ಷಿಸಿ ಪಂದ್ಯ ಸುಗಮವಾಗಿ ನಡೆಸಿಕೊಡಲು ಶ್ರಮಿಸಿದ ಸಿಬ್ಬಂದಿಗಳಿಗೆ ರೋಹಿತ್ ಶರ್ಮಾ ಉಡುಗೊರೆ ನೀಡಿದ್ದಾರೆ.

ಪಂದ್ಯದಲ್ಲಿ ಗೆದ್ದಿದ್ದಕ್ಕೆ ತಂಡಕ್ಕೆ ಸಿಕ್ಕ ಚೆಕ್ ನ್ನು ಮೈದಾನ ಸಿಬ್ಬಂದಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮೊನ್ನೆ ಭಾರತ-ಪಾಕಿಸ್ತಾನ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೈದಾನ ಸಿಬ್ಬಂದಿಗಳ ಶ್ರಮವನ್ನು ಕೊಂಡಾಡಿದ್ದರು.

ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಗೆದ್ದಿದ್ದಕ್ಕೆ ತಂಡಕ್ಕೆ ಸಿಕ್ಕ ಚೆಕ್ ನ್ನು ಮೈದಾನ ಸಿಬ್ಬಂದಿಗಳಿಗೆ ಉಡುಗೊರೆಯಾಗಿ ನೀಡಿದರು. ಈ ಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.