Saturday, August 1, 2026

BDA Apartments

Home Front Page ಶ್ರೀರಂಗಪಟ್ಟಣದ ನಿಮಿಶಾಂಬ ಮತ್ತು ರಂಗನಾಥಸ್ವಾಮಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ.

ಶ್ರೀರಂಗಪಟ್ಟಣದ ನಿಮಿಶಾಂಬ ಮತ್ತು ರಂಗನಾಥಸ್ವಾಮಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ.

ಶ್ರೀರಂಗಪಟ್ಟಣ,ಜುಲೈ,31,2021(www.justkannada.in): ಕೊರೋನಾ 2ನೇ ಅಲೆ ಕಡಿಮೆಯಾದ ಬೆನ್ನಲ್ಲೆ ಇದೀಗ 3ನೇ ಅಲೆಯ ಭೀತಿ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ನಿಮಿಶಾಂಬ ಮತ್ತು ರಂಗನಾಥಸ್ವಾಮಿ ದೇಗುಲಕ್ಕೆ ಆಯ್ದ ದಿನಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ಕೊರೋನಾ 3ನೇ ಅಲೆ ಆತಂಕ ಎದುರಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಎರಡು ದೇವಸ್ಥಾನಗಳಿಗೆ ಅಮಾವಸ್ಯೆ, ಹುಣ್ಣಿಮೆ,ಮಂಗಳವಾರ,ಶುಕ್ರವಾರ, ಭಾನುವಾರ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

Key words: Restriction – devotees – Nimishamba -Ranganathaswamy –temple- Srirangapatna