Sunday, August 23, 2026

BDA Apartments

Home Front Page ಎಸ್ ಸಿ, ಎಸ್ ಟಿ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಚಾರ: ರಾಜ್ಯ ಸರ್ಕಾರ ಕಾಯ್ದೆ ಎತ್ತಿ...

ಎಸ್ ಸಿ, ಎಸ್ ಟಿ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಚಾರ: ರಾಜ್ಯ ಸರ್ಕಾರ ಕಾಯ್ದೆ ಎತ್ತಿ ಹಿಡಿದ ಸುಪ್ರೀಂಕೋರ್ಟ್….

ನವದೆಹಲಿ,ಮೇ,10,2019(www.justkannada.in):   ಎಸ್ ಸಿ/ ಎಸ್ ಟಿ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್ ಸಿ, ಎಸ್ ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಕಾಯ್ದೆಯನ್ನ ರೂಪಿಸಲಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ತರಲಾಗಿದ್ದ ಈ ಕಾಯ್ದೆಯನ್ನ  ಪ್ರಶ್ನಿಸಿ ಬಿ.ಕೆ ಪವಿತ್ರ ಎಂಬುವವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಕಾಯ್ದೆಯನ್ನ ಎತ್ತಿಹಿಡಿದಿದೆ. ಈ ಮೂಲಕ ಬಿ.ಕೆ ಪವಿತ್ರಾ ಅವರಿಗೆ ಹಿನ್ನಡೆಯಾದಂತಾಗಿದೆ.

Key words: Reservation – SC / ST –employees- Supreme Court -upheld – state government’s -act