ಬೆಂಗಳೂರು,ಜೂನ್,3,2026 (www.justkannada.in): ರಾಜ್ಯದ ನೂತನ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದು ಇವರ ಜೊತೆಗೆ 14 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಹಿಂದೆ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ರಾಮಲಿಂಗರೆಡ್ಡಿ ಅವರಿಗೂ ಸ್ಥಾನ ಸಿಕ್ಕಿದೆ.
ಮತ್ತೆ ತಮಗೆ ಸಚಿವ ಸ್ಥಾನ ಸಿಕ್ಕ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಮಲಿಂಗರೆಡ್ಡಿ, ಈ ಹಿಂದೆ ಗೃಹ ಖಾತೆ ಸೇರಿ ಹಲವು ಖಾತೆನಿಭಾಯಿಸಿದ್ದೇನೆ. ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಡಿಕೆ ಶಿವಕುಮಾರ್ ಕರೆ ಮಾಡಿ ತಿಳಿಸಿದ್ದಾರೆ. ಹೈಕಮಾಂಡ್ ಯಾವ ಖಾತೆ ನೀಡುತ್ತೋ ನೋಡೋಣ ಎಂದರು.
ಹಾಗೆಯೇ ಬರೀ ಹೊಸಬರನ್ನ ಇಟ್ಟುಕೊಂಡು ಕೆಲಸ ಮಾಡೋದು ಕಷ್ಟ ಎಂದು ರಾಮಲಿಂಗರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
Key words: Minister, Post, Again, Ramalingareddy






