ಬೆಂಗಳೂರಿನಲ್ಲಿ ಮಳೆ ಅವಾಂತರ ಹಿನ್ನೆಲೆ: ಸಂಜೆ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್.

ಬೆಂಗಳೂರು,ಸೆಪ್ಟಂಬರ್,1,2022(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಠಿಯಾಗಿದ್ದು ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು  ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಂಜೆ  4 ಗಂಟೆಗೆ  ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್ಸ್ ಹಾಕಲಿದ್ದು  ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಪ್ರಮುಖವಾಗಿ  ಮಾರತ್ತಹಳ್ಳಿ ಭಾಗದಲ್ಲಿ  ಮಳೆ ಹಾನಿ ಅವಲೋಕಿಸಲಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು ಉದ್ಯಮಿ  ಮೋಹನ್ ದಾಸ್ ಪೈ ಸೇರಿ ಹಲವರು ಬೆಂಗಳೂರು ಉಳಿಸಿ ಎಂದು ಅಭಿಯಾನ ಕೈಗೊಂಡ ಹಿನ್ನೆಲೆ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಸಭೇ ನಡೆಸಿದ್ದರು. ಇನ್ನು  ತೀವ್ರ ಹಾನಿಯಾಗಿರುವ ಪ್ರದೇಶಗಳನ್ನ ಬಿಬಿಎಂಪಿ ಗುರುತಿಸಿದೆ.

Key words: rain disaster – Bengaluru-CM Bommai- city -rounds – evening.