“ಖಾಸಗಿ ಬಸ್ ಉರುಳಿಬಿದ್ದು, 30ಕ್ಕೂ ಹೆಚ್ಚು ಮಂದಿಗೆ ಗಾಯ”

ಮೈಸೂರು,ಮಾರ್ಚ್,21,2021(www.justkannada.in) :  ಚಾಲಕನ ಬೇಜಾವಾಬ್ದಾರಿತನದಿಂದ ಕಂದಕಕ್ಕೆ ಉರುಳಿದ ಬಸ್ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೈಸೂರು, ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.jkರಾತ್ರಿ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಸಂದರ್ಭ ನಂಜನಗೂಡು ಗ್ರಾಮದ ಕಂದೇಗಾಲ ಗ್ರಾಮದ ಬಳಿ ಚಾಲಕನ ಬೇಜಾವಾಬ್ದಾರಿತನದಿಂದ ಖಾಸಗಿ ಬಸ್ ಉರುಳಿಬಿದ್ದಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಘಟನೆ ಬಳಿಕ ಬಸ್ ಚಾಲಕ ಪರಾರಿಯಾಗಿದ್ದು, ನಂಜನಗೂಡು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

key words : private-bus-Fall down-30 people-Injury