ನಾನು ಏನೇ ರಾಜಕೀಯ ಮಾಡಿದ್ರೂ ಅದು ಮಂಡ್ಯದಲ್ಲಿ ಮಾತ್ರ: ಬೇರೆಡೆ ಸ್ಪರ್ಧಿಸಲ್ಲ- ಸಂಸದೆ ಸುಮಲತಾ ಅಂಬರೀಶ್.

ಬೆಂಗಳೂರು,ಮಾರ್ಚ್,20,2024(www.justkannada.in):  ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು ಹಿನ್ನೆಲೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ಹರಡಿದ ಹಿನ್ನೆಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅಂಬರೀಶ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿಗೆ ವಾಪಸ್ ಆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ನನ್ನ ರಾಜಕೀಯ ಏನಿದ್ರೂ ಮಂಡ್ಯದಲ್ಲಿ ಮಾತ್ರ. ನಾನು ಏನೇ ರಾಜಕೀಯ ಮಾಡಿದ್ರೂ ಅದು ಮಂಡ್ಯದಲ್ಲಿ ಮಾತ್ರ.  ಇದನ್ನೇ ವರಿಷ್ಠರಿಗೆ ಹೇಳಿ ಬಂದಿದ್ದೇನೆ. ವರಿಷ್ಠರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ.  ನೀವು ಬಿಜೆಪಿಯಲ್ಲೇ ಇರಬೇಕು ಎಂದಿದ್ದಾರೆ ಎಂದರು.

ಬೆಂಗಳೂರು ಉತ್ತರಕ್ಕೆ ನಾನು ಹೋಗಿಲ್ಲ ಇನ್ನೂ ಚಿಕ್ಕಬಳ್ಳಾಪುರಕ್ಕೆ  ಹೋಗ್ತೀನಾ..? ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡಲ್ಲ. ಮಂಡ್ಯ ಬಿಟ್ಟು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಏಕೆ ಹೋಗಬೇಕು ಎಂದು ಸುಮಲತಾ ಅಂಬರೀಶ್ ‍ಪ್ರಶ್ನಿಸಿದರು.

Key words:  politics -only – Mandya – MP -Sumalatha Ambarish.