Thursday, August 6, 2026

BDA Apartments

Home Front Page ಜೂ.21ರಂದು ಪ್ರಧಾನಿ ಮೋದಿ ಅಗಮನ: ಯೋಗ ದಿನಾಚರಣೆಗೆ 15 ಸಾವಿರ ಮಂದಿಗೆ ಅವಕಾಶ- ಸಚಿವ ಎಸ್.ಟಿ...

ಜೂ.21ರಂದು ಪ್ರಧಾನಿ ಮೋದಿ ಅಗಮನ: ಯೋಗ ದಿನಾಚರಣೆಗೆ 15 ಸಾವಿರ ಮಂದಿಗೆ ಅವಕಾಶ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಜೂನ್,14,2022(www.justkannada.in): ಜೂನ್ 21ರಂದು ಯೋಗ ದಿನಾಚಾರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿದ್ದು, ಯೋಗ ದಿನಾಚರಣೆಗೆ 15 ಸಾವಿರ ಮಂದಿಗೆ ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರದ 12 ಸಾವಿರ ಹಾಗೂ ಕೇಂದ್ರ ಸರ್ಕಾರದ 3 ಸಾವಿರ‌ ಮಂದಿ ಭಾಗಿಯಾಗಲಿದ್ದು ಈಗಾಗಲೇ ಆನ್ ಲೈನ್ ನೋಂದಣಿ ಆರಂಭವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಮೈಸೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ, ನಗರದ ಮಹಾರಾಜ ಕಾಲೇಜು ಮೈದಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಟಿ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ  ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಸಚಿವ ಎಸ್ ಟಿ ಸೋಮಶೇಖರ್ ಬೃಹತ್ ವೇದಿಕೆ ಸಿದ್ಧತೆ ವೀಕ್ಷಣೆ ಮಾಡಿದ್ದು, ಸಚಿವರಿಗೆ ಶಾಸಕ ಎಸ್ ಎ ರಾಮದಾಸ್, ಮೇಯರ್ ಸುನಂದಾ ಪಾಲಾನೇತ್ರ, ಮೂಡ ಅಧ್ಯಕ್ಷ ಹೆಚ್ ವಿ ರಾಜೀವ್ ಸಾಥ್ ನೀಡಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಯೋಗ ಕಾರ್ಯಕ್ರಮ ಮಾತ್ರ ಅಧಿಕೃತ ಆಗಿದೆ. ಅದರ ಜೊತೆಗೆ ಮೂರ್ನಾಲ್ಕು ಕಾರ್ಯಕ್ರಮ ಅಳವಡಿಸಿಕೊಂಡಿದ್ದೇವೆ. ಫಲಾನಿಭವಿಗಳ ಸಂವಾದ ಕಾರ್ಯಕ್ರಮ ನಡೆಸಲು ಚಿಂತಿಸಿದ್ದೇವೆ.ಇಂದು ಸಂಜೆ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ.ಎಷ್ಟು ಜನರನ್ನ ಸೇರಿಸಬೇಕು ಅಂತ ಅಂತಿಮ ತೀರ್ಮಾನ ಮಾಡ್ತೇವೆ. ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿದ್ದೇವೆ. ಪ್ರಧಾನಿ ಕಾರ್ಯಕ್ರಮಕ್ಕೆ ಯಾವುದೇ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಎಲ್ಲವನ್ನೂ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತೆ. ಇದರಲ್ಲಿ ನಮ್ಮ ಪಾತ್ರ ಏನೂ ಇರುವುದಿಲ್ಲ. ಅವರು ಕೊಡುವ ಮಾರ್ಗದರ್ಶನ ಪಾಲಿಸುತ್ತೇವೆ. ಯಾರೇ ಯೋಗ ಮಾಡಬೇಕಾದ್ರೂ ನೋಂದಣಿ ಆಗಲೇಬೇಕು. ಕೇಂದ್ರ ನೀಡುವ ಮಾರ್ಗದರ್ಶನವೇ ಪ್ರೋಟೋಕಾಲ್ ಎಂದರು.

ಎಸ್.ಎ ರಾಮದಾಸ್ ಹಾಗೂ ಪ್ರತಾಪ್ ಸಿಂಹ ನಡುವೆ ಯಾವುದೇ ಗೊಂದಲ ಇಲ್ಲ. ಇಬ್ಬರ ಉದ್ದೇಶ ಕಾರ್ಯಕ್ರಮ ಯಶಸ್ವಿಗೊಳಿಸೋದು ಅಷ್ಟೇ ಎಂದರು.

ಲಲಿತ್ ಮಹಲ್ ಖಾಸಗೀಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ಈ ಹಿಂದೆ ಸಹ ಈ ಬಗ್ಗೆ ಪ್ರಸ್ತಾವನೆ ಇತ್ತು‌. ಸಿ.ಪಿ ಯೋಗೇಶ್ವರ್ ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರಸ್ತಾವನೆ ಇತ್ತು. ಮೈಸೂರು ಜನಪ್ರಗತಿನಿಧಿಗಳ ಅಭಿಪ್ರಾಯದಂತೆ ಕೈ ಬಿಡಲಾಗಿತ್ತು. ಇದಕ್ಕಾಗಿ ಈಗ ಉಪಸಮಿತಿ ರಚನೆ ಮಾಡಲಾಗಿದೆ. ಸಚಿವ ಆನಂದ್ ಸಿಂಗ್ ಹಾಗೂ ನಾರಾಯಣ್ ಗೌಡ ಸೇರಿ ಸಾಕಷ್ಟು ಜನರಿದ್ದಾರೆ. ಆ ಸಮಿತಿ ಈ ಬಗ್ಗೆ ಸಭೆ ನಡೆಸಿ ತೀರ್ಮನ ಕೈಗೊಳ್ಳುತ್ತೆ ಎಂದು ಹೇಳಿದರು.

Key words: PM Modi-arrives-June 21-Yoga Day -Minister ST Somashekhar.