“ರೈತರ ಪ್ರತಿಭಟನೆ ಬೆಂಬಲಿಸಿ ಹತ್ತು ಸಾವಿರ ವಾಹನಗಳ ಪರೇಡ್”: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು,ಜನವರಿ,22,2021(www.justkannada.in) : ಗಣರಾಜ್ಯೋತ್ಸವದಂದು ಧ್ವಜಾರೋಹಣದ ನಂತರ ಹತ್ತು ಸಾವಿರ ವಾಹನಗಳ ಮೂಲಕ ನೆಲಮಂಗಲ ನೈಸ್ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ವರೆಗೆ ಪರೇಡ್ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.jk

ದೆಹಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ, ಪರೇಡ್ ನಡೆಸಲು ತೀರ್ಮಾನಿಸಲಾಗಿದೆ. ಪರೇಡ್ ನಡೆಸಲು ಅನುಮತಿ ಕೇಳಲಾಗಿದೆ.Parade-ten thousand-vehicles-supporting-farmers- protest-Kodihalli Chandrasekhar

ಆದರೆ, ಈವರೆಗೂ ಅನುಮತಿ ನೀಡಿಲ್ಲ. ಹೀಗಾಗಿ, ಪರೇಡ್ ತಡೆಯಲು ಸರ್ಕಾರ ಮುಂದಾದರೆ ಸರ್ಕಾರ ಪೇಚಿಗೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

key words : Parade-ten thousand-vehicles-supporting-farmers- protest-Kodihalli Chandrasekhar