Friday, August 21, 2026

BDA Apartments

Home Front Page ಸೆ.17ಕ್ಕೆ ಕರಾಮುವಿಯಲ್ಲಿ ಪಿಎಸ್‌ ಐ ಪರೀಕ್ಷೆ ತರಬೇತಿ ಶಿಬಿರ ಉದ್ಘಾಟನೆ.

ಸೆ.17ಕ್ಕೆ ಕರಾಮುವಿಯಲ್ಲಿ ಪಿಎಸ್‌ ಐ ಪರೀಕ್ಷೆ ತರಬೇತಿ ಶಿಬಿರ ಉದ್ಘಾಟನೆ.

ಮೈಸೂರು,ಸೆಪ್ಟಂಬರ್,15,2021(www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆಯೋಜಿಸಿರುವ ಪಿಎಸ್‌ಐ ಪರೀಕ್ಷೆಯ ನೇಮಕಾತಿ ತರಬೇತಿ ಶಿಬಿರ ಸೆ.17ರ ಶುಕ್ರವಾರ ಆರಂಭಗೊಳ್ಳಲಿದೆ.

ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 11ಕ್ಕೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಆಯುಕ್ತ ಪ್ರದೀಪ್ ಗುಂಟಿ ಅವರು ಆನ್ ಲೈನ್ ಶಿಬಿರಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಮಾರ್ಗದರ್ಶನ ನೀಡುವರು. ಪೊಲೀಸ್ ಇಲಾಖೆ ನಿವೃತ್ತ ಎಸ್ಪಿ ಶಂಕರೇಗೌಡ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು. ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಪ್ರೊ.ಆರ್.ರಾಜಣ್ಣ ಉಪಸ್ಥಿತರಿರುವರು ಎಂದು ಕೇಂದ್ರದ ಸಂಯೋಜನಾಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ಧಾರೆ.

ರಾಜ್ಯ ಸರ್ಕಾರ ಪಿಎಸ್‌ ಐ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಇದಕ್ಕಾಗಿ ವಿಶ್ವವಿದ್ಯಾನಿಲಯವು ತರಬೇತಿಯನ್ನು ಆರಂಭಿಸುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಆಸಕ್ತರು 0821 2515944 ಸಂಪರ್ಕಿಸಬಹುದು ಎಂದು ಕೋರಿದ್ಧಾರೆ.

Key words: Opening – PSI –Exam- Training -Camp –KSOU- Sep 17