Sunday, August 23, 2026

BDA Apartments

Home Front Page ರಾಜ್ಯದಲ್ಲಿ ಅನರ್ಹರ BPL ಕಾರ್ಡ್ ಮಾತ್ರ ರದ್ದು- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ರಾಜ್ಯದಲ್ಲಿ ಅನರ್ಹರ BPL ಕಾರ್ಡ್ ಮಾತ್ರ ರದ್ದು- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು,ನವೆಂಬರ್,18,2024 (www.justkannada.in):  ರಾಜ್ಯದಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ರದ್ದಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ರದ್ದಾಗಿದೆ.  ರಾಜ್ಯಾದ್ಯಂತ 10 ಸಾವಿರ ಬಿಪಿಎಲ್ ಕಾರ್ಡ್ ಗಳು ರದ್ದಾಗಲಿವೆ ಎಂದರು.

ಅನ್ನಭಾಗ್ಯ  ಯೋಜನೆ ಮಾಡಿದ್ದು ನಾನು. ಬಿಜೆಪಿಯವರು ಕೊಟ್ಟರಾ..? ಬಿಜೆಪಿಯವರು ಯಾವತ್ತಾದರೂ ಅನ್ನಭಾಗ್ಯ ಯೋಜನೆ  ನೀಡಿದ್ದಾರಾ? ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡು ನೀಡಬೇಕು. ಬಡವರಿಗೆ ಬಿಪಿಎಲ್ ಕಾರ್ಡು ತಲುಪಬೇಕು ಎಂದರು.

Key words: Only, ineligible, BPL card, canceled, CM Siddaramaiah