ಹೃದಯಾ‍‍ಘಾತದಿಂದ ಕರ್ತವ್ಯನಿರತ ಯೋಧ ಸಾವು.

ಮಹಾರಾಷ್ಟ್ರ,ಸೆಪ್ಟಂಬರ್,14,2022(www.justkannada.in):  ಹೃದಯಾಘಾತದಿಂದ ಕರ್ತವ್ಯ ನಿರತ ಯೋಧ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಈ ಘಟನೆ ನಡೆದಿದೆ. ಶಂಕರ ಯಲಿಗಾರ (33) ಮೃತಪಟ್ಟವರು.  ಶಂಕರ ಅವರು ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಮೆಲ್ಮಟ್ಟಿ ಗ್ರಾಮದವರಾಗಿದ್ದು ಕಳೆದ 13 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇಂದು ಸ್ವಗ್ರಾಮ ಮೆಲ್ಮಟ್ಟಿಗೆ ಮೃತ ಯೋಧ ಶಂಕರ್ ಅವರ ಪಾರ್ಥೀವ ಶರೀರ ಬರಲಿದೆ.

Key words:  on-duty- soldier -died -heart attack.