ಹೆಚ್.ಡಿ ಕುಮಾರಸ್ವಾಮಿ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ- ಸಚಿವ ಸಂತೋಷ್ ಲಾಡ್.

ಬೆಂಗಳೂರು,ನವೆಂಬರ್,16,2023(www.justkannada.in):  ಎಲ್ಲಾ ಸರ್ಕಾರಗಳಲ್ಲೂ ವರ್ಗಾವಣೆ ಸಹಜ . ಸರ್ಕಾರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್  ಹೇಳಿದರು.

ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, ಯತೀಂದ್ರ ವಿಚಾರದ ಬಗ್ಗೆ ಮಾಹಿತಿ ಗೊತ್ತಿಲ್ಲ. ಎಲ್ಲಾ ಸರ್ಕಾರಗಳಲ್ಲೂ ವರ್ಗಾವಣೆಗಳು ನಡೆಯುವುದು ಸಹಜ. ಹೆಚ್,ಡಿ ಕುಮಾರಸ್ವಾಮಿ ಆರೋಪದಂತೆ ವರ್ಗಾವಣೆ ದಂಧೆ ಅನ್ನೋದು ನಡೆಯುತ್ತಿಲ್ಲ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.

Key words: no substance – HD Kumaraswamy-allegations-Minister -Santosh Lad.