ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ, ಶೇಖರಣೆಗೆ ಕಂಟೈನರ್’ಗೆ ಸಮಸ್ಯೆ: ಸಚಿವ ಮುರುಗೇಶ್ ನಿರಾಣಿ

ಮೈಸೂರು, ಮೇ 23, 2021 (www.justkannada.in): ರಾಜ್ಯದಲ್ಲಿಆಕ್ಸಿಜನ್ಕೊರತೆಇಲ್ಲ. ನಮ್ಮಲ್ಲಿಸಾಕಷ್ಟುಪ್ರಮಾಣದಲ್ಲಿಆಕ್ಸಿಜನ್ಇದೆ. ಆದರೆಅದನ್ನುಶೇಖರಣೆಮಾಡಲುಕಂಟೇನರ್ಗಳಕೊರತೆಇದೆಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಆಗ್ತಿದೆ. ಕೇಂದ್ರದಿಂದಲೂ ಆಕ್ಸಿಜನ್ ಪೂರೈಕೆ ಆಗ್ತಿದೆ. ಸಿಲಿಂಡರ್ ಗಳ ಕೊರತೆಯಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಗುಲ್ಬರ್ಗಾದಲ್ಲಿ ಪ್ರತಿನಿತ್ಯ 500 ಕಂಟೇನರ್ ತಯಾರಿಸುವ ಕಾರ್ಯ ನಡೆಯುತ್ತಿದೆ. ಶೀಘ್ರವೇ ರಾಜ್ಯದಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಕೊರತೆ ನೀಗಲಿದೆ ಎಂದು ಮಾಹಿತಿ ನೀಡಿದರು.