Friday, August 14, 2026

BDA Apartments

Home Front Page ಜಾತಿ ಗಣತಿ ಕುರಿತ ಕಾಂತರಾಜು ವರದಿಯನ್ನ ಬಿಡುಗಡೆ ಮಾಡಿ- ನಿಖಿಲ್ ಕುಮಾರಸ್ವಾಮಿ ಆಗ್ರಹ

ಜಾತಿ ಗಣತಿ ಕುರಿತ ಕಾಂತರಾಜು ವರದಿಯನ್ನ ಬಿಡುಗಡೆ ಮಾಡಿ- ನಿಖಿಲ್ ಕುಮಾರಸ್ವಾಮಿ ಆಗ್ರಹ

ಬೆಂಗಳೂರು,ಸೆಪ್ಟಂಬರ್,27,2025 (www.justkannada.in): ಜಾತಿ ಗಣತಿ ಕುರಿತ ಕಾಂತರಾಜು ವರದಿಯನ್ನ ಬಿಡುಗಡೆ ಮಾಡಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ,  ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕಳೆದ ಎರಡು ದಿನದಿಂದ ತಾಂತ್ರಿಕ ಕಾರಣದಿಂದ ಸ್ಥಗಿತವಾಗಿದೆ. ಟ್ಯಾಲೆಂಟ್ ಇರುವ ಯುವಕರು ಬೇರೆ ರಾಜ್ಯ ವಿದೇಶಕ್ಕೆ ಹೋಗಿದ್ದಾರೆ. ಸಾಮಾಜಿಕ. ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಎಷ್ಟು ಮನೆಗೆ ತಲುಪಿದೆ. ಸರ್ವರ್ ಸಮಸ್ಯೆಯಾದರೆ ಯಾವಾಗ ಸಮೀಕ್ಷೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಶಿಕ್ಷಕರಿಗೆ ಸಹ ತರಬೇತಿ ನೀಡಿಲ್ಲ.  ಜಾತಿ ಗಣತಿ ಕುರಿತ ಕಾಂತರಾಜು ವರದಿಯನ್ನ ಬಿಡುಗಡೆ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

Key words: Release, Kantaraju report, caste census, Nikhil Kumaraswamy