“ಕೆವಾಡಿಯಾದಿಂದ ವಿವಿಧ ಪ್ರದೇಶಗಳ ಸಂಪರ್ಕಿಸುವ 8 ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ”

ನವದೆಹಲಿ,ಜನವರಿ,17,2021(www.justkannada.in) :  ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಈಗ ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದ್ದಾರೆ.jk-logo-justkannada-mysore

ಈ ಕುರಿತು ಮಾತನಾಡಿ, ಕೆವಾಡಿಯಾ ಪ್ರವಾಸಿಗರ ತಾಣವಾಗಿ ಹೊರಹೊಮ್ಮುತ್ತಿದೆ. ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ರೈಲ್ವೆ ಯೋಜನೆ ಕೆವಾಡಿಯಾದ  ಬುಡಕಟ್ಟು ಜನಾಂಗಕ್ಕೂ ಅನುಕೂಲವಾಗಲಿದೆ ಎಂದಿದ್ದಾರೆ.Kevadia-Connecting-different-areas-8 trains-Prime Minister-Narendra Modi-Driving 

ಬುಡಕಟ್ಟು ಜನಾಂಗದ ಜೀವನ ಸಹ ಬದಲಿಸಲಿದೆ. ಕೆವಾಡಿಯಾಗೆ ಅನೇಕ ಸೌಲಭ್ಯಗಳನ್ನು ತರಲಾಗಿದೆ. ಆದಿವಾಸಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

key words : Kevadia-Connecting-different-areas-8 trains-Prime Minister-Narendra Modi-Driving