Friday, September 18, 2026

BDA Apartments

ಅಪ್ಪ ಚೆಕ್ ಮೂಲಕ, ಮಗ ಆರ್ ಟಿ ಜಿಎಸ್ ಮೂಲಕ ಲಂಚ ಪಡೆಯುತ್ತಾರೆ : ಮಾಜಿ ಸಿಎಂ ಸಿದ್...
Home Front Page ಅಪ್ಪ ಚೆಕ್ ಮೂಲಕ, ಮಗ ಆರ್ ಟಿ ಜಿಎಸ್ ಮೂಲಕ ಲಂಚ ಪಡೆಯುತ್ತಾರೆ : ಮಾಜಿ...

ಅಪ್ಪ ಚೆಕ್ ಮೂಲಕ, ಮಗ ಆರ್ ಟಿ ಜಿಎಸ್ ಮೂಲಕ ಲಂಚ ಪಡೆಯುತ್ತಾರೆ : ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ 

ಬೆಂಗಳೂರು,ಅಕ್ಟೋಬರ್,25,2020(www.justkannada.in) : ಸರಕಾರದಲ್ಲಿ ಭ್ರಷ್ಟಚಾರ ಹೆಚ್ಚಾಗಿದೆ. ಇಂಥ ಭ್ರಷ್ಟ ಸರಕಾರ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಅಪ್ಪ ಚೆಕ್ ಮೂಲಕ, ಮಗ ಆರ್ ಟಿ ಜಿಎಸ್ ಮೂಲಕ ಲಂಚ ಪಡೆಯುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.jk-logo-justkannada-logo

ಕಲಬುರುಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರಕಾರ ಪ್ರವಾಹ ಪರಿಸ್ಥಿತಿ ಸರಿಯಾಗಿ ನಿಭಾಯಿಸುತ್ತಿಲ್ಲ. ನೆರೆಪೀಡಿತ ಪ್ರದೇಶದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿರುವ ವೈಮಾನಿಕ ಸಮೀಕ್ಷೆ ಯಾವುದೇ ಪ್ರಯೋಜನವಿಲ್ಲ. ಅಲ್ಲಿನ ಜನರ ಜತೆ ಮಾತಾಡಿಲ್ಲ, ನೆರಪೀಡಿತ ಪ್ರದೇಶಕ್ಕೆ ಹೋಗಿಲ್ಲ. ಹೀಗೆ ವೈಮಾನಿಕ ಸಮೀಕ್ಷೆ ನಡೆಸಿದರೆ ಏನು ಪ್ರಯೋಜನ ಎಂದು ಕಿಡಿಕಾರಿದ್ದಾರೆ.Dad-checks-son-gets-bribed-RTGS-Former-CM Siddaramaiah- barrage

ಡಿಸಿಎಂ ಸವದಿ ರಾಜಕೀಯ ಮಾತನಾಡುತ್ತಾರೆ. ನೆರೆ ಸಂತ್ರಸ್ತರ ಬಗ್ಗೆ ಮಾತಾಡೋದು ಬಿಟ್ಟಿದ್ದಾರೆ. ನೆರೆ ಸಂತ್ರಸ್ತರಿಗೆ ನಯಾಪೈಸೆ ಹಣ ನೀಡಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

key words : Dad-checks-son-gets-bribed-RTGS-Former-CM Siddaramaiah- barrage