ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಎನ್ ಇಪಿ ರದ್ದು- ಶಾಸಕ ಪ್ರಿಯಾಂಕ್ ಖರ್ಗೆ.

ಬೆಂಗಳೂರು,ಅಕ್ಟೋಬರ್,7,2022(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರದ್ಧುಪಡಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಅಧೀಕಾರಕ್ಕೆ ಬಂದರೆ ಎನ್ ಇಪಿ ರದ್ದುಪಡಿಸುತ್ತೇವೆ. ಈಗಿನ ಹೊಸ ಶಿಕ್ಷಣ  ನಾಗ್ಪುರ ಎಜುಕೇಷನ್ ಪಾಲಿಸಿಯಂತೆ . ನಮಗೆ ಪುರಾಣಗಳ ಬಗ್ಗೆ ವಿರೋಧವಿಲ್ಲ.  ಬಿಜೆಪಿಯವರು ಪುರಾಣಗಳನ್ನ ಮಾತ್ರ ನಂಬುತ್ತಾರೆ. ಕೇವಲ ಪುರಾಣಗಳಿಂದ ದೇಶ ಬೆಳೆಯುವುದಿಲ್ಲ ವೈಜ್ಞಾನಿಕ ನಂಬಿಕೆಯ ಮೇಲೆ ದೇಶ ಮುನ್ನಡೆಸಬೇಕಿದೆ ಎಂದರು.

Key words: NEP – cancel- if –Congress- comes – power-MLA -Priyank Kharge.