Saturday, August 1, 2026

BDA Apartments

Home Front Page ನಾಡಪ್ರಭು ಕೆಂಪೇಗೌಡರ ಜಯಂತಿ : ಕೆರೆ ಹಾಗೂ ಕಲ್ಯಾಣಿಗಳ ಜೀರ್ಣೋದ್ಧಾರದ ಮೂಲಕ ವಿನೂತನವಾಗಿ ಆಚರಣೆ..

ನಾಡಪ್ರಭು ಕೆಂಪೇಗೌಡರ ಜಯಂತಿ : ಕೆರೆ ಹಾಗೂ ಕಲ್ಯಾಣಿಗಳ ಜೀರ್ಣೋದ್ಧಾರದ ಮೂಲಕ ವಿನೂತನವಾಗಿ ಆಚರಣೆ..

ಮೈಸೂರು,ಜೂ,27,2019(www.justkannada.in): ಇಂದು ಬೆಂಗಳೂರು ನಿರ್ಮಾಪಕ ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆ ಮೈಸೂರಿನಲ್ಲಿ  ವಿನೂತನವಾಗಿ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಯಿತು.

ಕೆಂಪೇಗೌಡರಿಗೆ ಗೌರವ ಸಲ್ಲಿಸಲು ಕೆರೆಗಳು ಹಾಗೂ ಕಲ್ಯಾಣಿಗಳ ಜೀರ್ಣೋದ್ಧಾರದ ಮೂಲಕ ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ಜನಚೇತನ ಟ್ರಸ್ಟ್, ಯುವ ಬ್ರಿಗೇಡ್ ಹಾಗೂ ಇತರೆ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮೈಸೂರಿನ ಲಲಿತಾದ್ರಿ ಪುರದಲ್ಲಿನ ಐನ್ನೋರು ಕಟ್ಟೆ  ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದ್ದು , ಜೀರ್ಣೋದ್ಧಾರ ಕಾರ್ಯದಲ್ಲಿ ಎನ್.ಐ.ಟಿ. ಪ್ರಥಮ ದರ್ಜೆ ಕಾಲೇಜಿನ ಸ್ವಯಂ ಸೇವಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ನೂರಾರು ವಿದ್ಯಾರ್ಥಿಗಳ ಸಹಾಯದಿಂದ ಐನ್ನೋರು ಕಟ್ಟೆ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಮೈಸೂರಿನಲ್ಲಿ ಜನಚೇತನ ಟ್ರಸ್ಟ್ ನ ಅಧ್ಯಕ್ಷ ಪ್ರಸನ್ನ ಎನ್. ಗೌಡ, ಕೆಂಪೇಗೌಡರು ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಸ್ಥಾಪನೆ ಮಾಡುವ ಮೂಲಕ ರೈತಾಪಿ ಜನರಿಗೆ ಸಹಾಯ ಮಾಡಿದ್ದರು. ಆದ್ರೇ ಇಂದು ಕೆರೆ ಕಟ್ಟೆಗಳು ಕಣ್ಮರೆಯಾಗುತ್ತಿವೆ.  ಅವುಗಳ ರಕ್ಷಣೆ ನಮ್ಮ ಹೊಣೆ. ಹೀಗಾಗಿ ಕಲ್ಯಾಣಿ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

Key words: Nadaprabhu Kempegowda- Jayanti -celebration -mysore