Wednesday, August 12, 2026

BDA Apartments

Home Front Page ಸಿದ್ದರಾಮಯ್ಯ ವಿರುದ್ಧ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಗುಟ್ಟನ್ನು ಬಹಿರಂಗ ಪಡಿಸಿದ ವಿಜಯೇಂದ್ರ.

ಸಿದ್ದರಾಮಯ್ಯ ವಿರುದ್ಧ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಗುಟ್ಟನ್ನು ಬಹಿರಂಗ ಪಡಿಸಿದ ವಿಜಯೇಂದ್ರ.

 

ಮೈಸೂರು, ಸೆ.09, 2020 : (www.justkannada.in news) : ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಮೈಸೂರಿನ ವರುಣಾ ಕ್ಷೇತ್ರ ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿತ್ತು. ಕಾರಣ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಜತೆಗೆ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಈ ಕ್ಷೇತ್ರದಿಂದಲೇ ಕಣಕ್ಕಿಳಿಯುವ ಮೂಲಕ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದದ್ದು.

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅಖಾಡಕ್ಕೆ ಇಳಿಯುವುದು ಬಹುತೇಕ ನಿಶ್ಚಿತ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಪೂರಕವಾಗಿ ಎಂಬಂತೆ ವಿಜಯೇಂದ್ರ ಸಹ ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಕಾರಣವಾಗಿತ್ತು.

mysore-varuna-election-siddaramaiah- vijayendra-bsy-bjp

ಆದರೆ ಬದಲಾದ ಸನ್ನಿವೇಶದಲ್ಲಿ, ಕಡೆ ಗಳಿಗೆಯಲ್ಲಿ ವಿಜಯೇಂದ್ರ ಅಖಾಡದಿಂದ ಹಿಂದೆ ಸರಿಯಬೇಕಾಯಿತು. ಸ್ಪರ್ಧೆಗೆ ಮುಂದಾಗಿದದ್ದು, ಮತ್ತೆ ಹಿಂದೆ ಸರಿದದ್ದು ನಿಗೂಢ. ಅದೇ ರೀತಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರಗೆ ಕ್ಷೇತ್ರ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು.

ಈ ಘಟನೆಯ ಗುಟ್ಟನ್ನು ಖುದ್ದು ವಿಜಯೇಂದ್ರ ಅವರು ಮೈಸೂರಿನಲ್ಲಿ ಬಹಿರಂಗ ಪಡಿಸಿದ್ದಾರೆ. ನಗರದಲ್ಲಿ ಮಂಗಳವಾರ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ಜತೆ ಮಾತನಾಡಿ ಹೇಳಿದಿಷ್ಟು.
ನಾನು ರಾಜಕೀಯ ಪ್ರವೇಶಿಸಬೇಕು ಎಂದು ಅಂದುಕೊಂಡಿರಲಿಲ್ಲ. ಆದರೆ ವರುಣಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆಂದು ಹೆಚ್ಚು ಸಲ ಓಡಾಡಿದ್ದೆ. ಈ ವೇಳೆ ಪಕ್ಷದ ಬಹುತೇಕ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಲು ಬಿಜೆಪಿಯಿಂದ ನೀವೆ ಕಣಕ್ಕಿಳಿಯಬೇಕು ಎಂಬ ಒತ್ತಡ ಹೇರ ತೊಡಗಿದರು. ಅನಿವಾರ್ಯವಾಗಿ ನಾನು ಈ ಒತ್ತಡಕ್ಕೆ ಮಣಿದು ಕಣಕ್ಕಿಳಿಯಲು ಸಹಮತ ವ್ಯಕ್ತಪಡಿಸಿದೆ.

mysore-varuna-election-siddaramaiah- vijayendra-bsy-bjp

ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿದ್ದದ್ದಿಷ್ಟೆ, ಸಿದ್ದರಾಮಯ್ಯ ಒರ್ವ ಹಿರಿಯ ರಾಜಕಾರಣಿ, ಜತೆಗೆ ಹಾಲಿ ಮುಖ್ಯಮಂತ್ರಿಯಾಗಿದ್ದವರು. ಅಂಥವರ ವಿರುದ್ಧ ಸ್ಪರ್ಧಿಸಿ ಗೆದ್ದರೆ, ಸಿಟ್ಟಿಂಗ್ ಸಿಎಂ ಅನ್ನು ಸೋಲಿಸಿದ ಕೀರ್ತಿ. ಆ ಮೂಲಕ ಹೊಸದೊಂದು ಇತಿಹಾಸ ಸೃಷ್ಠಿ. ಒಂದು ವೇಳೆ ಸೋತರೂ ಅದರಿಂದ ನನಗೇನು ನಷ್ಟವಿಲ್ಲ. ಏಕೆಂದರೆ ಸಿಎಂ ವಿರುದ್ಧ ಸೋತೆ ಎನ್ನುವ ಸಮಧಾನವೇ ಇರುತ್ತಿತ್ತು ಎಂದು ವಿಜಯೇಂದ್ರ ತಮ್ಮ ಸ್ಪರ್ಧೆಯ ಹಿಂದಿನ ಗುಟ್ಟು ಬಹಿರಂಗ ಪಡಿಸಿದರು.

 

key words : mysore-varuna-election-siddaramaiah- vijayendra-bsy-bjp