ವಾಹನ ಸವಾರನನ್ನ ತಡೆದು ದರೋಡೆ ಮಾಡಿ ಎಸ್ಕೇಪ್ ಆದ ಖದೀಮರು…

ಮೈಸೂರು,ಆ,24,2020(www.justkannada.in):  ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಖಾಸಗಿ ಕಂಪನಿಯ ನೌಕರನನ್ನ ಖದೀಮರು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk-logo-justkannada-logo

ಮೈಸೂರಿನ ಎನ್ ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನೆನ್ನೆ ರಾತ್ರಿ ಈ ಘಟನೆ ನಡೆದಿದೆ. ಖಾಸಗಿ ಕಂಪನಿಯ ನೌಕರ, ಎನ್ ಆರ್.ಮೊಹಲ್ಲಾ ನಿವಾಸಿ ಪುನೀತ್ ದರೋಡೆಗೆ ಒಳಗಾದ ವ್ಯಕ್ತಿ. ಪುನೀತ್ ರಾತ್ರಿ 10 ಗಂಟೆ ವೇಳೆ  ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.mysore-robbery-private-company-employee

ಪುನೀತ್ ಬಳಿ ಇದ್ದ ಸರ ದೋಚಿದ ದರೋಡೆಕೋರರು, ಡ್ರ್ಯಾಗರ್ ತೋರಿಸಿ ಹಲ್ಲೆ ಮಾಡಿ ಬೆದರಿಸಿ ನಂತರ ಎಸ್ಕೇಪ್ ಆಗಿದ್ದಾರೆ. ಹಲ್ಲೆ ವೇಳೆ  ಪುನೀತ್ ಗಂಭೀರ ಗಾಯಗೊಂಡಿದ್ದು, ಈ ಕುರಿತು ಎನ್,ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ಸ್  ಪೆಕ್ಟರ್ ಶೇಖರ್ ನೇತೃತ್ವದಲ್ಲಿ  ತನಿಖೆ ಆರಂಭವಾಗಿದೆ.

Key words: mysore- robbery-private- company – Employee