ಮೈಸೂರು ಪೊಲೀಸರಿಂದ ಸರಗಳ್ಳನ ಬಂಧನ: 13 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ.

ಮೈಸೂರು,ನವೆಂಬರ್,1,2022(www.justkannada.in): ಮೈಸೂರಿನ ಪೊಲೀಸರು ಓರ್ವ ಸರಗಳ್ಳನನ್ನ ಬಂಧಿಸಿ 13 ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

ಮೈಸೂರು ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಮಾಲು ಪತ್ತೆ ಸಂಬಂಧ ಕೃಷ್ಣರಾಜ ಉಪವಿಭಾಗದ ಅಪರಾಧ ಪತ್ತೆ ದಳ ಮತ್ತು ಸರಸ್ವತಿಪುರಂ ಮತ್ತು ಅಶೋಕಪುರಂ ಠಾಣೆಯ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.  ಈ ತಂಡಗಳು ದಿನಾಂಕ: 29-10-2022 ರಂದು ಒಬ್ಬ ಸರಗಳ್ಳ ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ಆರೋಪಿತನು ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಜೊತೆಗೂಡಿ ಮೈಸೂರು ನಗರ ವಿವಿಧ ಪೊಲೀಸ್ ಠಾಣಾ ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಸಂಬಂಧ  8 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಪ್ರಕರಣಗಳಿಂದ ರೂ. 13,00,000/- ಬೆಲೆಬಾಳುವ ಸುಮಾರು 290 ಗ್ರಾಂ ತೂಕದ 9 ಚಿನ್ನದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಪತ್ತೆಯಿಂದ ಮೈಸೂರು ನಗರ ಸರಸ್ವತಿಪುರಂ ಪೊಲೀಸ್ ಠಾಣೆಯ 01 (2 ಚಿನ್ನದ ಸರಗಳು), ವಿಜಯನಗರ ಪೊಲೀಸ್‌ ಠಾಣೆಯ 01, ಮಂಡಿ ಪೊಲೀಸ್ ಠಾಣೆಯ 02, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ 02, ಕುವೆಂಪುನಗರ ಪೊಲೀಸ್ ಠಾಣೆಯ 01 ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ 01 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ಗೀತ.ಎಂ.ಎಸ್ ಮಾರ್ಗದರ್ಶನದಲ್ಲಿ ಕೃಷ್ಣರಾಜ ಉಪ ವಿಭಾಗದ ಎ.ಸಿ.ಪಿ ಗಂಗಾಧರಸ್ವಾಮಿ. ಎಸ್.ಇ ಅವರ ನೇತೃತ್ವದಲ್ಲಿ ಸರಸ್ವತಿಪುರಂ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವೀಂದ್ರ. ಸಿ.ಎಂ. ಪಿಎಸ್‌ ಐ ಸ್ಮಿತಾ.ಎಂ.ಕೆ ಅವರ ತಂಡ ಕಾರ್ಯಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಜು.ಪಿ.ಜೆ. ನಾರಾಯಣಶೆಟ್ಟಿ, ಲೋಕೇಶ್.ಹೆಚ್.ಜೆ. ಮೋಹನ್‌ ಕುಮಾರ್, ರಾಘವೇಂದ್ರ, ಉಮೇಶ್, ಮಂಜು, ಬಸವರಾಜು, ಮನ್ಯಾಳ್, ಪವನ್, ರವಿಕುಮಾರ್, ಮಹೇಶ್, ಸಾಗರ್, ಸುರೇಶ್, ಹರೀಶ್‌ಕುಮಾರ್, ವೆಂಕಟೇಶ್, ಶ್ರೀನಿವಾಸ, ಸೋಮಶೇಖರ, ಶಿಲ್ಪಾ ಹರೀಶ್  ಪಾಲ್ಗೊಂಡಿದ್ದರು.

Key words : Mysore -police- arrested –thief- 13 lakh- gold jewelery- seized.