Wednesday, July 29, 2026

BDA Apartments

Home Front Page ಮೈಸೂರಿನ ಗ್ರಾಮವೊಂದರಲ್ಲಿ ಕರಡಿ ಕಾಟಕ್ಕೆ ಭಯಭೀತರಾದ ಜನರು…

ಮೈಸೂರಿನ ಗ್ರಾಮವೊಂದರಲ್ಲಿ ಕರಡಿ ಕಾಟಕ್ಕೆ ಭಯಭೀತರಾದ ಜನರು…

ಮೈಸೂರು,ಮಾ,17,2020(www.justkannada.in): ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಕೋಣನೂರು ಗ್ರಾಮಕ್ಕೆ ಕರಡಿ ಎಂಟ್ರಿಕೊಟ್ಟಿದ್ದು ಕರಡಿ ಕಾಟಕ್ಕೆ ಜನರು ಹೈರಾಣಾಗಿದ್ದಾರೆ.

ಕೋಣನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಕರಡಿ ಅಡಗಿದ್ದು ಕರಡಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಯಷ್ಟೇ ಗ್ರಾಮಕ್ಕೆ ಚಿರತೆ ಪ್ರತ್ಯೆಕ್ಷವಾಗಿ ಗ್ರಾಮದ ಜನರಲ್ಲಿ ಆತಂಕ ಸೃಷ್ಠಿಸಿತ್ತು. ಇದೀಗ ಕರಡಿ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು ಜನ ಭಯಭೀತರಾಗಿದ್ದಾರೆ.

ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ  ತಡೆಯಬೇಕೆಂದು ಕೊಣನೂರು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Key words: Mysore- People- fearing – bear – village