ವಧುವಿಗೆ ‘ಕೈ’ ಕೊಟ್ಟು ಪ್ರಿಯತಮೆಯೊಂದಿಗೆ ಎಸ್ಕೇಪ್ ಆದ ವರ…

ಮೈಸೂರು,ಡಿಸೆಂಬರ್,9,2020(www.justkannada.in):  ಹಸಮಣೆ ಏರಬೇಕಿದ್ದ ವರ ಮದುವೆಗೂ ಎರಡು ದಿನ ಮೊದಲೇ ವಧುವಿಗೆ ಕೈಕೊಟ್ಟು ಪ್ರೇಯಸಿ ಜತೆ ಪರಾರಿಯಾಗಿದ್ದು, ವಧುವಿನ ಮನೆಯವರು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.logo-justkannada-mysore

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಇಂದು ಮದುವೆ ಸಡಗರ ಸಂಭ್ರಮ ಮೇಳೈಸುತ್ತಿತ್ತು. ಆದರೆ ವರನೇ ವಧುವಿಗೆ ಕೈಕೊಟ್ಟು ಪ್ರಿಯತಮೆ ಜತೆ ಎಸ್ಕೇಪ್ ಆಗಿದ್ದಾನೆ. ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ಸುಣ್ಣದಕೇರಿಯ ಉಮೇಶ್ ಪರಾರಿಯಾದ ವರ.

ಉಮೇಶ್ ಜತೆ ಕೆ.ಆರ್. ಮೊಹಲ್ಲಾದ ಯುವತಿಯ ಮದುವೆಯನ್ನು ಎರಡೂ ಕುಟುಂಬದ ಹಿರಿಯರು ನಿಶ್ಚಯಿಸಿದ್ದರು. ಬುಧವಾರ ಮದುವೆ ನೆರವೇರಬೇಕಿತ್ತು. ಆದರೆ, ಮತ್ತೊಬ್ಬಳನ್ನು ಪ್ರೀತಿಸುತ್ತಿದ್ದ ವರ ಉಮೇಶ್ ಸೋಮವಾರವೇ ಆಕೆಯೊಂದಿಗೆ ಎಸ್ಕೇಪ್​ ಆಗಿದ್ದಾನೆ.

ಇದರಿಂದ ಕಂಗಾಲಾದ ಕುಟುಂಬಸ್ಥರು ಮದುವೆಯನ್ನು ರದ್ದು ಮಾಡಿದ್ದಾರೆ. ವಧುವಿನ ಪೋಷಕರು ಉಮೇಶ್​ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Key words: mysore-escape-lover- break-marriage- police