Wednesday, July 29, 2026

BDA Apartments

Home Front Page ಮೈಸೂರು ದಸರಾ ಮಹೋತ್ಸವ: ನಂದಿಧ್ವಜಕ್ಕೆ ಸಿಎಂ ಬೊಮ್ಮಾಯಿ ಪೂಜೆ ಸಲ್ಲಿಕೆ.

ಮೈಸೂರು ದಸರಾ ಮಹೋತ್ಸವ: ನಂದಿಧ್ವಜಕ್ಕೆ ಸಿಎಂ ಬೊಮ್ಮಾಯಿ ಪೂಜೆ ಸಲ್ಲಿಕೆ.

 

ಮೈಸೂರು, ಅಕ್ಟೋಬರ್,5,2022(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದು ಕೆಲವೇ ಕ್ಷಣಗಳಲ್ಲಿ ಮೆರವಣಿಗೆ ಆರಂಭವಾಗಲಿದೆ.

ಜಂಬೂ ಸವಾರಿಗೂ ಮೊದಲೇ ಸಂಪ್ರದಾಯದಂತೆ ಸಿಎಂ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪೂಜೆ ಸಲ್ಲಿಕೆ ಮಾಡಿದರು. ಅರಮನೆಯ ಬಲರಾಮ ದ್ವಾರದ ಬಳಿ ಸಿಎಂ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪುಷ್ಪಾಚನೆ ಮಾಡಿ ಪೂಜೆ ಸಲ್ಲಿಕೆ ಮಾಡಿದರು.

ಸಿಎಂ ಬಸವರಾಜ ಬೊಮ್ಮಾಯಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವ ಸುನೀಲ್ ಕುಮಾರ್ ಸಾಥ್ ನೀಡಿದರು.

Key words: Mysore- Dasara Mahotsav-CM Bommai – Nandi dwaja- puja