ರಾಮಮಂದಿರ ವಿಚಾರ ಈಗ ಬಿಜೆಪಿಯವರಿಗೆ ತಿರುಗು ಬಾಣ- ಸಿಎಂ ಸಿದ್ದರಾಮಯ್ಯ ಲೇವಡಿ.

ಮೈಸೂರು,ಮಾರ್ಚ್,27,2024 (www.justkannada.in):  ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಕೂಡಲೇ ದೇಶದಲ್ಲಿ ತಮ್ಮ ಪರ ಅಲೆ ಸೃಷ್ಟಿ ಆಗುತ್ತೆ ಅಂತಾ ಬಿಜೆಪಿ ಅಂದು ಕೊಂಡಿತ್ತು. ಆದರೆ ಅದೇ ವಿಚಾರ ಅವರಿಗೆ ತಿರುಗು ಬಾಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಮೈಸೂರಿನಲ್ಲಿ ನಡೆದ ಬಿಜೆಪಿ, ಜೆಡಿಎಸ್  ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ವಿಧಾನಸಭಾ ಚುನಾವಣೆಗೂ ಮುನ್ನ ಒಮ್ಮೆ ಕೋಟೆ ಶಿವಣ್ಣ ಜೊತೆ ಮಾತನಾಡಿದ್ದೆ. ಕಾಂಗ್ರೆಸ್ ಪಕ್ಷ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದೆ. ನೀನೊಬ್ಬ ದಲಿತ ನಾಯಕನಾಗಿದ್ದು ಕೋಮುವಾದಿ ಬಿಜೆಪಿಯಲ್ಲಿರೋದು ಬೇಡ ಎಂದಿದ್ದೆ. ಬಿಜೆಪಿ ಒಂದು ಕೋಮುವಾದಿ ಪಕ್ಷ. ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಅದಕ್ಕೆ ಬಿಜೆಪಿಯಲ್ಲಿರುವರನ್ನೆಲ್ಲ ಮನುವಾದಿಗಳು ಎಂದು ಕರೆಯೋದು. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಜನ ಶಿಕ್ಷಣದಿಂದ ದೂರವಾದರು. ಸಂವಿಧಾನ ಜಾರಿ ನಂತರ ಜನರಿಗೆ ಶಿಕ್ಷಣ ಸಿಕ್ಕಿದೆ. ಸಂವಿಧಾನ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಹೇಳುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅದು ಕಾಂಗ್ರೆಸ್ ಪಕ್ಷ. ಇತಿಹಾಸ ತಿಳಿಯದವರು ಭವಿಷ್ಯ ನಿರ್ಮಾಣ ಮಾಡಲಿಕ್ಕೆ ಸಾಧ್ಯವಿಲ್ಲ. ನಾವೆಲ್ಲರೂ ಸಂವಿಧಾನವನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಮೋದಿ ಪ್ರಧಾನಿಯಾದ ಬಳಿಕ ಬೆಲೆ ಏರಿಕೆ: ಇಂತಹವರಿಗೆ ವೋಟ್ ಕೊಡಬೇಕಾ.

ಮೋದಿಯವರು ಅಚ್ಛೇ ದಿನ್ ಆಯೇಗಾ ಅಂದರು. ಮೋದಿ ಬಂದ ಮೇಲೆ ಅಚ್ಛೇ ದಿನ್ ಬಂದಿದೇಯಾ. ಮೋದಿಯವರು ಅಧಿಕಾರಕ್ಕೆ ಬಂದಾಗ ಸಿಲಿಂಡರ್ ಬೆಲೆ 450 ರೂ. ಇತ್ತು, ಈಗ 1ಸಾವಿರ ರೂ. ಆಗಿದೆ. ಮೋದಿ ಪ್ರಧಾನಿಯಾದ ಬಳಿಕ ಬೆಲೆ ಏರಿಕೆಯಾಗಿದೆ.ಇಂತಹವರಿಗೆ ವೋಟ್ ಕೊಡಬೇಕಾ..? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಕೂಡಲೇ ದೇಶದಲ್ಲಿ ತಮ್ಮ ಪರ ಅಲೆ ಸೃಷ್ಟಿ ಆಗುತ್ತೆ ಅಂತಾ ಬಿಜೆಪಿ ಅಂದು ಕೊಂಡಿತ್ತು. ಆದರೆ ಅದೇ ವಿಚಾರ ಅವರಿಗೆ ತಿರುಗು ಬಾಣವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಾತ್ರ ಇದ್ದಾರೆ. ಸೀತೆ ಇಲ್ಲ. ಲಕ್ಷ್ಮಣ ಇಲ್ಲ. ಹನುಮಂತ ಇಲ್ಲ. ಯಾಕೆ ಅವರನ್ನು ಬೇರ್ಪಡಿಸಿದ್ದಿರಿ? ಇವರಿಗೆ ಒಂದು ಕುಟುಂಬ ಒಟ್ಟಿಗೆ ಇರೋದು ಇಷ್ಟವಿಲ್ಲ. ಹೀಗಾಗಿ ರಾಮನ ಕುಟುಂಬ ಒಡೆದಿದ್ದಾರೆ. ಅದಕ್ಕೆ ನಾವು ಜೈ ಸೀತಾರಾಮ್ ಅಂತಾ ಘೋಷಣೆ ಕೂಗುತ್ತಾ ಇರೋದು ಎಂದು ಕಿಡಿಕಾರಿದರು.

ಶಿವಮೊಗ್ಗದಲ್ಲಿ ಆ ಈಶ್ವರಪ್ಪ ಇದ್ದಾನಲ್ಲ ಬಿಜೆಪಿ ಅನ್ನು ಹಾಡಿ ಹೊಗಳಿ ಹೊಗಳಿ ಇಡುತ್ತಿದ್ದ. ಈಗ ಈಶ್ವರಪ್ಪನ ಸ್ಥಿತಿ ಏನಾಗಿದೆ ? ಯಡಿಯೂರಪ್ಪ ಜೊತೆ ಜಗಳವಾಡ್ತಾ ನಿಂತಿಲ್ವಾ? ಈಶ್ವರಪ್ಪ ಬಿಜೆಪಿ ಸಿದ್ಧಾಂತ ತನ್ನಿಂದಲ್ಲೇ ಸೃಷ್ಟಿಯಾಯ್ತ ಅನ್ನೋ ರೀತಿ ಮಾತಾಡ್ತಿದ್ದ. ಈಗ ಏನಾಗಿದೆ ನೋಡಿ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

Key words: mysore, CM, Siddaramaiah