‘ಎಯ್ ಹೋಗಂಗಿದ್ರೆ ಎದ್ದು‌ ಹೋಗಿ, ಇಲ್ಲ ಕುಳಿತ್ಕೊಳ್ಳಿ’- ಸಭೀಕರ ಮೇಲೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿ.

ಮೈಸೂರು,ಜನವರಿ,24,2024(www.justkannada.in): ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರು ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಇಂದು ಪಿರಿಯಾಪಟ್ಟಣ ತಾಲೂಕಿನ ಕೊಪ್ಪಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ  ಸಿಡಿಮಿಡಿಗೊಂಡ ಘಟನೆ ನಡೆದಿದೆ.

ಕೊಪ್ಪಾ ಗ್ರಾಮದಲ್ಲಿ  ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಈ ನಡುವೆ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಬರುತ್ತಿದ್ದಂತೆ  ಜನರು ಊಟಕ್ಕೆ ತೆರಳಿದ್ದಾರೆ. ಈ ವೇಳೆ ತಕ್ಷಣ ಮೈಕ್ ಹಿಡಿದು ಗದರಿದ ಸಿಎಂ ಸಿದ್ದರಾಮಯ್ಯ. ಏ ಅಲ್ಲಿ ಊಟ ಕೊಡಬೇಡಪ್ಪ. ಎಯ್ ಹೋಗಂಗಿದ್ರೆ ಎದ್ದು‌ ಹೋಗಿ, ಇಲ್ಲ ಕುಳಿತ್ಕೊಳ್ಳಿ ಎಂದು ಸಿಡಿಮಿಡಿಕೊಂಡರು.

ಜನರಿಗೆ ತಾಳ್ಮೆ ಇಲ್ಲ, ನಾಯಕರಿಗೆ ಬದ್ಧತೆ ಇಲ್ಲ. ಹೋಗುವಂತ್ತಿದ್ದರೆ ಎದ್ದು ಹೋಗಿ ಎಂದು ಜನರ ಮೇಲೆ ಸಿಎಂ  ಸಿದ್ದರಾಮಯ್ಯ ರೇಗಿದ ಘಟನೆ ನಡೆಯಿತು.

Key words: mysore- CM Siddaramaiah – yelled- people