ಚಾಮುಂಡಿಬೆಟ್ಟದ ಬಳಿ ಕೆಎಸ್ ಆರ್ ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ..

ಮೈಸೂರು,ಜು,26,2019(www.justkannada.in): ಇಂದು ಕೊನೆ ಅಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟದಿಂದ ಬರುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ವೊಂದರ ಬ್ರೇಕ್ ಏರ್ ಪೈಪ್ ತುಂಡಾಗಿದ್ದು, ಈ ವೇಳೆ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಇಂದು ಕೊನೆ ಆಷಾಢ ಶುಕ್ರವಾರ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ಈ ನಡುವೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಕೆ.ಎಸ್ ಆರ್ ಟಿಸಿ ಬಸ್ ನ ಬ್ರೇಕ್ ಏರ್ ಪೈಪ್ ತುಂಡಾಗಿದೆ. ಇದನ್ನ ಅರಿದ ಚಾಲಕ ತಕ್ಷಣ ಬಸ್ ಅನ್ನ ತಡೆಗೋಡೆಗೆ ತಗಲುವಂತೆ ಮಾಡಿ ಬಸ್ ನಿಯಂತ್ರಿಸಿದ್ದಾರೆ. ಈ ಮೂಲಕ  ಸಂಭವಿಸಬಹುದಾದ ಅಪಾಯವನ್ನ ತಪ್ಪಿಸಿದ್ದಾರೆ.

ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದು ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಚಾಲಕನ ಸಮಯ ಪ್ರಜ್ಞೆಯನ್ನ ಪ್ರಯಾಣಿಕರು ಶ್ಲಾಘಿಸಿದ್ದಾರೆ.

Key words: mysore-chamundi hills-KSRTC bus- brake- driver