ಬಿರುಕು ಬಿಟ್ಟ ದೊಡ್ಡ ಗಡಿಯಾರದ ಕಟ್ಟಡ ವೀಕ್ಷಣೆ: ತಂತ್ರಜ್ಞಾನ ಬಳಸಿ ರಿಪೇರಿಗೆ ಚಿಂತನೆ…

ಮೈಸೂರು,ಜೂ,15,2020(www.justkannada.in): ನಗರದಲ್ಲಿರುವ ಪಾರಂಪರಿಕ ಇತಿಹಾಸವುಳ್ಳ ಬೃಹತ್ ದೊಡ್ಡ ಗಡಿಯಾರದ ಕಟ್ಟಡದ ಮೇಲ್ಬಾಗದಲ್ಲಿ ಬಿರುಕು ಬಿಟ್ಟಿದ್ದು ಈ ಹಿನ್ನೆಲೆ ಇಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಭೇಟಿ ನೀಡಿ ವೀಕ್ಷಣೆ ಮಾಡಿದರು.mysore-big-clock-repair-corporation-commissioner-visit

ಕಟ್ಟಡದ ಮೇಲ್ಬಾಗದಲ್ಲಿ ಇರುವ ಗಂಟೆಯ ಬಳಿ ಬಿರುಕು ಕಂಡಿತ್ತು. ಹೀಗಾಗಿ ಪಾರಂಪರಿಕ ತಜ್ಞರು ಹಾಗೂ ಪಾಲಿಕೆ ಅಯುಕ್ತ ಗುರುದತ್ತ್ ಹೆಗ್ಡೆ  ಅವರು ದೊಡ್ಡ ಗಡಿಯಾರ ಕಟ್ಟಡದ ಬಳಿ ತೆರಳಿ ವೀಕ್ಷಣೆ ಮಾಡಿದರು.  ಈ ಸಂಬಂಧ ಈಗಾಗಲೇ ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಿದ್ದು ಕಟ್ಟಡಕ್ಕೆ ಪುನರ್ ಜೀವನ ನೀಡಲು ಚಿಂತನೆ ನಡೆಸಿದೆ. ತಂತ್ರಜ್ಞಾನ ಬಳಸಿ ಕಟ್ಟಡ ರಿಪೇರಿ ಮಾಡಿಸಲು ಚಿಂತನೆ ನಡೆಸಲಾಗಿದೆ.

Key words: mysore- big clock-repair- corporation -Commissioner -visit