ಮೈಸೂರು ಮೂಲದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಅಮೇರಿಕಾದಲ್ಲಿ ಸಾವು

ಮೈಸೂರು: ಮೈಸೂರು ಮೂಲದ 28 ವರ್ಷದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಅಮೇರಿಕಾದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಶಾರದದೇವಿನಗರದ ನಿವಾಸಿ, ಕಾಡಾ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ನಿವೃತ್ತರಾಗಿರುವ ಎನ್.ಬಿ.ತುಕಾರಾಮ್ ಮತ್ತು ಎನ್.ಶಾಲಿನಿ ಅವರ ಮಗ ಟಿ.ಪ್ರತೀಕ್ ತೇಲ್ಕರ್ ಅಮೇರಿಕಾದಲ್ಲಿ ಹೃದಯಾಘಾತಕ್ಕೆ ಒಳಗಾದ ದುರ್ದೈವಿ.

ಮೃತರ ಪಾರ್ಥೀವ ಶರೀರ ಮಾರ್ಚ್ 5 ರಂದು ಮೈಸೂರು ತಲುಪುವ ನಿರೀಕ್ಷೆಯಿದ್ದು, ಅಂದೇ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.