Friday, August 21, 2026

BDA Apartments

Home Front Page ಮೈಸೂರು ಅರಣ್ಯ ಭವನಕ್ಕೆ ರೈತಮುಖಂಡರಿಂದ ಮುತ್ತಿಗೆ

ಮೈಸೂರು ಅರಣ್ಯ ಭವನಕ್ಕೆ ರೈತಮುಖಂಡರಿಂದ ಮುತ್ತಿಗೆ

ಮೈಸೂರು,ಫೆಬ್ರವರಿ,19,2026 (www.justkannada.in): ವಿರೋಧದ ನಡುವೆಯೂ ಇಂದಿನಿಂದಲೇ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಆರಂಭ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತಸಂಘದಿಂದ ಪ್ರತಿಭಟನೆಗಳಿಗೆ ಕರೆ ನೀಡಿದ್ದು ಇಂದು ರೈತ ಮುಖಂಡರು ಮೈಸೂರಿನ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸಫಾರಿ ಆರಂಭ ವಿರೋಧಿಸಿ ಮೈಸೂರಿನಲ್ಲಿ ರೈತನಾಯಕ ಹೊನ್ನೂರು ಪ್ರಕಾಶ್, ಮಂಜು ಕಿರಣ್ ಹೋರಾಟದ ಕರೆ ನೀಡಿದ್ದು  ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿಯೂ ಹೋರಾಟ ನಡೆಸಲಾಗುತ್ತಿದೆ.

ಇಂದು ರೈತ ಮುಖಂಡ ಹಳ್ಳಿಕೆರೆ ಭಾಗ್ಯರಾಜ್ ನೇತೃತ್ವದಲ್ಲಿ ರೈತಮುಖಂಡರು  ಮೈಸೂರು ಅರಣ್ಯ ಭವನ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಸಫಾರಿ ಪಾಯಿಂಟ್ ಬಳಿಯೂ ಧರಣಿ ನಡೆಸಲಾಗಿದೆ.

ಕಾಡಿನ ಬದಲು ಕಾಸನ್ನು ಕಾಪಾಡಿದ ಕಾಡುಮಂತ್ರಿ ಎಂದು ರೈತಮುಖಂಡರು ಕಿಡಿ ಕಾರಿದ್ದು,  ಎಷ್ಟು ಜನ ರೈತರ ಪ್ರಾಣ ಬೇಕು ನಿಮಗೆ ? ಅಕ್ರಮ ರೆಸಾರ್ಟ್ಸ್ ಮಾಲೀಕರ ಹಣ ತಿಂದು ರೈತರ ಬಲಿ ಕೊಡ್ತೀರಾ? ರೆಸಾರ್ಟ್ಸ್ ಮಾಲೀಕರ ಕಾಸು ತಿಂದು ರೈತರ ಜೊತೆ ಆಟ ಆಡ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಫಾರಿ ಆರಂಭಿಸಿದರೆ ಬೀದಿಗಿಳಿದು ಹೋರಾಟ ಮಾಡುವುದು ಗ್ಯಾರೆಂಟಿ.  ಸಫಾರಿಯಿಂದ ಹಲವು ರೈತರ ಪ್ರಾಣ ಹಾನಿ ಆಗಿದೆ. ಸಫಾರಿ ನಿಂತ ಮೇಲೆ ಹುಲಿ ದಾಳಿ ನಿಂತಿದೆ ಎಂದು ರೈತಮುಖಂಡರು ಹರಿಹಾಯ್ದಿದ್ದಾರೆ.

Key words: Mysore, Aranya Bhavan, besieged, farmer leaders