Tuesday, August 4, 2026

BDA Apartments

Home Front Page ಮುಡಾ ಕೇಸ್: ಇಡಿ ತಕರಾರು ಅರ್ಜಿ ವಿಚಾರಣೆ ಏ.5ಕ್ಕೆ ಮುಂದೂಡಿಕೆ

ಮುಡಾ ಕೇಸ್: ಇಡಿ ತಕರಾರು ಅರ್ಜಿ ವಿಚಾರಣೆ ಏ.5ಕ್ಕೆ ಮುಂದೂಡಿಕೆ

ಬೆಂಗಳೂರು,ಏಪ್ರಿಲ್,3,2025 (www.justkannada.in):  ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೂಡಿಕೆ ಮಾಡಿದೆ.

ಇಡಿ ತಕರಾರು ಅರ್ಜಿ ವಿಚಾರಣೆಯನ್ನ ಕೈಗೆತ್ತಿಕೊಂಡ  ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಗಜಾನನಭಟ್, ಇಡಿ ಪರ ವಕೀಲರ ವಾದ ಆಲಿಸಿದರು. ಈ ಮಧ್ಯೆ ಲೋಕಾಯುಕ್ತ ಪರ ಎಸ್ ಪಿಪಿ ವಾದ ಮಂಡನೆ ಆಲಿಸಲು ನಿರ್ಧರಿಸಿ ನ್ಯಾಯಾಧೀಶರು ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿಕೆ ಮಾಡಿದರು.

ಈ ಮಧ್ಯೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಈಗಾಗಲೆ ಇಡಿಗೆ ಹೈಕೋರ್ಟ್ ಅನುಮತಿ ನೀಡಿದೆ.

Key words: Muda case, ED, objection,  petition, hearing, April 5