ಸೆ.12 ರಂದು ಬೆಂಗಳೂರಿನಿಂದ ಮೈಸೂರಿಗೆ ಮೋಟಾರ್ ಸೈಕಲ್  ರ್ಯಾಲಿ…

ಬೆಂಗಳೂರು,ಸೆಪ್ಟಂಬರ್,11,2020(www.justkannada.in): ಕರ್ನಾಟಕ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸೆಪ್ಟಂಬರ್ 12ರಂದು  ಬೆಂಗಳೂರಿನಿಂದ ಮೈಸೂರಿಗೆ ಮೋಟಾರ್ ಸೈಕಲ್  ರ್ಯಾಲಿ ಆಯೋಜಿಸಲಾಗಿದೆ.jk-logo-justkannada-logo

ಕರ್ನಾಟಕ ಪ್ರವಾಸೋದ್ಯಮ ವೇದಿಕೆ (ಕೆಟಿಎಫ್) 2020 ರ ಸೆಪ್ಟೆಂಬರ್ 12 ರ ಶನಿವಾರ ‘ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಮೋಟಾರ್ ಸೈಕಲ್  ರ್ಯಾಲಿ ಹಮ್ಮಿಕೊಂಡಿದೆ. ಮೋಟಾರ್ ಸೈಕಲ್ ರ್ಯಾಲಿಯು ಬೆಂಗಳೂರಿನ ಯುಬಿ ಸಿಟಿಯಿಂದ ಹೊರಟು ಮೈಸೂರು ತಲುಪಲಿದೆ.Motorcycle rally - Bangalore - Mysore - September 12- KTF

ಕೆಟಿಎಫ್, ಪ್ರೆಸ್ಟೀಜ್ ಓಕ್ವುಡ್ ಮತ್ತು ರಾಯಲ್ ಆರ್ಕಿಡ್ ಹೋಟೆಲ್‌ ಗಳ  ಪ್ರಾಯೋಜಕತ್ವದಲ್ಲಿ ಈ ಮೋಟಾರ್ ಸೈಕಲ್  ರ್ಯಾಲಿ ಆಯೋಜಿಸಲಾಗಿದೆ. ಸಾಮಾಜಿಕ ಅಂತರ  ಮತ್ತು ಸ್ವ-ಸುರಕ್ಷತೆಯ ಹೊಸ ನಿಯಮಗಳನ್ನು ಅನುಸರಿಸಿದರೆ  ಪ್ರವಾಸಿ ತಾಣಗಳಿಗೆ ಪ್ರಯಾಣಿಸಲು ಸುರಕ್ಷಿತವಾಗಿದೆ ಎಂಬ ಅರಿವನ್ನು ಮೂಡಿಸಲು ಮತ್ತು ಪ್ರಚಾರ ಮಾಡಲು ಈ ಸಾಂಕೇತಿಕ ರ್ಯಾಲಿಯನ್ನು ಆಯೋಜಿಸಲಾಗಿದೆ. ರ್ಯಾಲಿಯಲ್ಲಿ  ಇಂಡಿಯನ್ ಮೋಟಾರ್‌ ಸೈಕಲ್ ರೈಡರ್ಸ್ ಗ್ರೂಪ್ ನವರು ಭಾಗವಹಿಸುವಹಿಸಲಿದ್ದಾರೆ.

ರ್ಯಾಲಿ ಹೊರಡುವ ವಿವರ

ದಿನಾಂಕ: 2020 ರ ಸೆಪ್ಟೆಂಬರ್ 12 ರ ಶನಿವಾರ

ಸಮಯ: ಬೆಳಿಗ್ಗೆ 7:00

ಸ್ಥಳ: ಪ್ರೆಸ್ಟೀಜ್ ಓಕ್ವುಡ್, ಯು ಬಿ ಸಿಟಿ, ಬೆಂಗಳೂರು.

ಹೆಚ್ಚಿನ ಮಾಹಿತಿಗೆ

ಶ್ರೀ ರವಿ+919901909419 ಇವರನ್ನು ಸಂಪರ್ಕಿಸಬಹುದು.

Key words: Motorcycle rally – Bangalore – Mysore – September 12- KTF