ಸಿಪಿ ಇಲೆವೆಲ್ ತಂಡಕ್ಕೆ ರೋಚಕ ಗೆಲುವು

ಮೈಸೂರು, ಜ. 26,2021(www.justkannada.in):  ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಮಂಗಳವಾರ ಡಿಸಿ ಇಲೆವೆಲ್ ಮತ್ತು ಸಿಪಿ ಇಲೆವೆಲ್ ನಡುವೆ ನಡೆದ ಗಣರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಸಿಪಿ ಇಲೆವೆನ್ ತಂಡ ರೋಚಕ ಗೆಲುವು ಸಾಧಿಸಿತು.
ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಆಯೋಜಿಸಿದ್ದ ಈ ಪಂದ್ಯದಲ್ಲಿ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಅವರ ನೇತೃತ್ವದ ಸಿಪಿ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ‌ 114 ರನ್ ಗಳಿಸಿತು. ಗೆಲುವಿಗೆ 115 ರನ್‌ಗಳ ಗುರಿಯೊಂದಿಗೆ ಬೆನ್ನಟಿದ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರ ನೇತೃತ್ವದ ಡಿಸಿ ಇಲೆವೆನ್ ತಂಡ 20 ಓವರ್‌ಗಳಲ್ಲಿ 6 ವಿಕೇಟ್ ನಷ್ಟಕ್ಕೆ 102 ರನ್ ಗಳಿಸಲು ಸಾಧ್ಯವಾಯಿತು.  most exciting -win - CP Ilevel team
ಟ್ರೋಫಿ ವಿತರಣೆ ಸಭಾರಂಭದಲ್ಲಿ ಜಿ‌.ಎಸ್.ಎಸ್.ಯೋಗ ಸಂಸ್ಥೆಯ ಶ್ರೀಹರಿ, ಕ್ಲಿಯರ್‌ಮೆಡಿ ರೇಡಿಯಂಟ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಎ. ಆರ್. ಮಂಜುನಾಥ್, ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆರಂಭದಲ್ಲಿ ಪಂದ್ಯಕ್ಕೆ ಚಾಲನೆ ನೀಡಿ ಶುಭಕೋರಿದರು.

most exciting -win – CP Ilevel team