Wednesday, September 2, 2026

BDA Apartments

Home Front Page ಹುಲಿಗಳ ಸಾವು ಬೆನ್ನಲ್ಲೆ ಕೋತಿಗಳ ಮಾರಣಹೋಮ: ವಿಷ ಹಾಕಿ ಕೊಂದ್ರಾ ಕಿಡಿಗೇಡಿಗಳು?

ಹುಲಿಗಳ ಸಾವು ಬೆನ್ನಲ್ಲೆ ಕೋತಿಗಳ ಮಾರಣಹೋಮ: ವಿಷ ಹಾಕಿ ಕೊಂದ್ರಾ ಕಿಡಿಗೇಡಿಗಳು?

ಚಾಮರಾಜನಗರ,ಜುಲೈ,2,2025 (www.justkannada.in): ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಮೀಣಂ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಾವು ಪ್ರಕರಣ ಹಸಿರಾಗಿರುವಾಗಲೇ ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಸುಮಾರು 25ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ ಮಾಡಲಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಡಿಪುರ ಬಫರ್ ಜೋನ್ ವಲಯದಲ್ಲಿ  ಸುಮಾರು 25 ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ ನಡೆದಿದ್ದು, ಕೋತಿಗಳ ಕಾಟಕ್ಕೆ ಬೇಸತ್ತು ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.

ವಿಷಹಾಕಿ ಸತ್ತ ಕೋತಿಗಳನ್ನು ಚೀಲಕ್ಕೆ ತುಂಬಿಕೊಂಡು ಬಂದು ಕಿಡಿಗೇಡಿಗಳು ಬಿಸಾಡಿ ಹೋಗಿದ್ದಾರೆ. ಕಂದೇಗಾಲದ ಪಾರ್ವತಿ ಬೆಟ್ಟದ ಬಳಿ ಸತ್ತ ಕೋತಿಗಳ ಬಿಸಾಕಿದ್ದು ಸತ್ತಿಬಿದ್ದಿರುವ ಕೋತಿಗಳನ್ನ ಕಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.vtu

Key words: Monkey, poison, death, Chamarajanagar