ಮೈಸೂರು,ಮಾರ್ಚ್,7,2026 (www.justkannada.in): ಟಿ.ನರಸೀಪುರದಲ್ಲಿ ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇಂದು ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಟಿ.ನರಸೀಪುರದಲ್ಲಿ ರೇಷ್ಮೆ ಕಾರ್ಖಾನೆಯನ್ನು ಮುಚ್ಚಲ್ಲ. ನಮ್ಮ ಕ್ಷೇತ್ರದ ಜನರೇ ಕೆಲಸ ಮಾಡುತ್ತಿದ್ದಾರೆ. ನಾವು ಯಾಕೆ ಕಾರ್ಖಾನೆ ಮುಚ್ಚುತ್ತೇವೆ. ಸುಮ್ಮನೆ ಕೆಲವರು ಸುಳ್ಳು ಹೇಳಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಂದ ತಾಂತ್ರಿಕ ವರದಿ ಕೇಳಿದ್ದೇವೆ. ಕ್ರೀಡಾಂಗಣದಿಂದ ತೊಂದರೆಯಾದರೆ ಬೇರೆ ಜಾಗ ಹುಡುಕುತ್ತೇವೆ ಎಂದರು.
ನಮಗೆ ಕಾರ್ಖಾನೆಯೂ ಮುಖ್ಯ. ಕ್ರೀಡಾಂಗಣವೂ ಮುಖ್ಯ ಕ್ರೀಡಾಂಗಣಕ್ಕಾಗಿ ಕಾರ್ಖಾನೆಯನ್ನ ಎಂದಿಗೂ ಮುಚ್ಚಲ್ಲ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Key words: Silk factories, not, closed, MLC, Yathindra Siddaramaiah







