ರಾಯಚೂರು,ಸೆಪ್ಟಂಬರ್,3,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ 180 ಕೋಟಿ ರೂ . ಹಗರಣ ಮಾಡಿ ಈಗ ಏನು ಮಾಡಿಲ್ಲ ಎನ್ನುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಿಡಿಕಾರಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಹಗರಣ ಖಂಡಿಸಿ ಬಿಜೆಪಿ ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಶಾಸಕ ಸುನೀಲ್ ಕುಮಾರ್ ಪಾಲ್ಗೊಂಡು ಮಾತನಾಡಿದರು.
ಆಡಳಿತ ಪಕ್ಷ ಗೂಂಡಾಗಿರಿ ಮಾಡುತ್ತಿದೆ. ಗೃಹಲಕ್ಷ್ಮೀ ಹಣವನ್ನು ನುಂಗಿದೆ. ಬಿಜೆಪಿ ನಾಯಕರಲ್ಲಿ ಗೊಂದಲ ಇಲ್ಲ ಸರ್ಕಾರವನ್ನ ತಿದ್ದಬೇಕು. ಸರ್ಕಾರ 180 ಕೋಟಿ ರೂ. ಹಗರಣ ಮಾಡಿ ಏನು ಮಾಡಿಲ್ಲಅಂದ್ರ ಹೇಗೆ ? ಎಂದು ಗುಡುಗಿದರು.
Key words: Rs 180 crore, scam, Congress Government, MLA, Sunil Kumar







