Wednesday, August 19, 2026

BDA Apartments

Home Front Page ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಿ- ‘ಕೈ’ ಶಾಸಕ ಆಗ್ರಹ

ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಿ- ‘ಕೈ’ ಶಾಸಕ ಆಗ್ರಹ

ಬೆಂಗಳೂರು,ಜುಲೈ,4,2026 (www.justkannada.in): ನಾನು ಸಚಿವಸ್ಥಾನದ ಆಕಾಂಕ್ಷಿ ಅಲ್ಲ. ಸಚಿವಮ ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರಂಗನಾಥ್, ನಮ್ಮ ಕುಟುಂಬದಲ್ಲಿ ಈಗಾಗಲೇ ಸಿಎಂ ಇದ್ದಾರೆ.  ಆದಷ್ಟು ಬೇಗೆ ಪೂರ್ಣ ಪ್ರಮಾಣಧಲ್ಲಿ ಸಂಪುಟ ರಚನೆ ಆಗುತ್ತೆ.  ಹಿರಿಯರ ಅಸಮಾಧಾನವನ್ನೂ ಸರಿಪಡಿಸುವ ಕೆಲಸ ಆಗುತ್ತೆ. ಹೊಸಬರಿಗೂ ಹಿರಿಯರಿಗೂ ಸಂಫುಟದಲ್ಲಿ ಅವಕಾಶ ಕೊಡಬೇಕು.  ಸಿಎಂ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದರು.

ಹಾಗೆಯೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ದ ಕಿಡಿ ಕಾರಿದ ಶಾಸಕ ರಂಗನಾಥ್,  ನಿಖಿಲ್ ಕುಮಾರಸ್ವಾಮಿ ನನ್ನ ಜೀನ್ಸ್ ಬಗ್ಗೆ ಮಾತನಾಡಿದ್ದು ಖಂಡನೀಯ. ನನ್ನ ತಾಲ್ಲೂಕಿನ ಜೀನ್ಸ್ ಬಗ್ಗೆ ಮಾತನಾಡುವುದಕ್ಕೆ ಏನು ಹಕ್ಕಿದೆ ನಿಮ್ಮ ರೀತಿ ನಾನು ಮಾಜಿ ಪ್ರಧಾನಿ ಮಂತ್ರಿಗಳ ಮೊಮ್ಮಗ ಅಲ್ಲ ಮಾಜಿ ಸಿಎಂ ಮಗನೂ ಅಲ್ಲ ನಾನು ಬಡ ರೈತನ ಮಗ ಎಂದು ತಿರುಗೇಟು ನೀಡಿದರು.

Key words: Cabinet expansion, congress, MLA , Ranganath