ಅನ್ನಭಾಗ್ಯದ ಅಕ್ಕಿಯಿಂದ ಮಂತ್ರಾಕ್ಷತೆ : ಡಿಕೆ ಶಿವಕುಮಾರ್ ಹೇಳಿಕೆಗೆ ಶಾಸಕ ಅಶ್ವಥ್ ನಾರಾಯಣ್ ಕಿಡಿ.

ಬೆಂಗಳೂರು,ಜನವರಿ,8,2024(www.justkannada.in): ಅನ್ನಭಾಗ್ಯದ ಅಕ್ಕಿಯಿಂದ ಮಂತ್ರಾಕ್ಷತೆ ನೀಡಲಾಗುತ್ತಿದೆ ಎಂಬ ಡಿಸಿಎಂ  ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕಿಡಿ ಕಾರಿದ್ದಾರೆ.

ಈ ಕುರಿತು ಮಾತನಾಡಿದ ಅಶ್ವಥ್ ನಾರಾಯಣ್,  ರಾಮನಗರ ಜಿಲ್ಲೆಯಲ್ಲೂ ಮಂತ್ರಾಕ್ಷತೆ ನೀಡುವ ಕೆಲಸವಾಗುತ್ತಿದೆ. ಡಿಕೆ ಶಿವಕುಮಾರ್ ಹೇಳಿಕೆ ಕೀಳು ಮಟ್ಟದ ಹೇಳಿಕೆ.  ಧರ್ಮವನ್ನು ಅಗೌರವಿಸೋದು ಸರಿಯಲ್ಲ.  ಭಗವಂತನನ್ನು ಪೂಜಿಸುವವರು ಈ ರೀತಿ ಹೇಳಿಕೆ ನೀಡಬಾರದು. ಡಿಕೆ ಶಿವ ಕುಮಾರ್  ಕೂಡಲೇ ಕ್ಷಮೆಯಾಚಿಸಿ ಗೌರವದಿಂದ ನಡೆದುಕೊಳ್ಳಲಿ. ನಿಮ್ಮಗೌರವಕ್ಕೆ ಧಕ್ಕೆ ತರುವ ಹೇಳಿಕೆ ನೀಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: MLA -Ashwath Narayan – DK Shivakumar- statement