Saturday, August 15, 2026

BDA Apartments

Home Front Page ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನಕ್ಕೆ ಸಚಿವ ಸುನೀಲ್‌ ಕುಮಾರ್ ಚಾಲನೆ.

ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನಕ್ಕೆ ಸಚಿವ ಸುನೀಲ್‌ ಕುಮಾರ್ ಚಾಲನೆ.

ಬೆಂಗಳೂರು,ಅಕ್ಟೋಬರ್,24,2021(www.justkannada.in):  66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆಸುತ್ತಿರುವ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್ ಇಂದು ಚಾಲನೆ ನೀಡಿದರು.

ಬೆಂಗಳೂರು ನಗರದ ಲಾಲ್ ಬಾಗ್ ಸಸ್ಯತೋಟದಲ್ಲಿ ಕಿರು ನಾಟಕ ಮಾತಾಡ್ ಮಾತಾಡ್ ಕನ್ನಡ ಉದ್ಘಾಟನೆ ಮಾಡುವ ಮೂಲಕ ಅಭಿಯಾನಕ್ಕೆ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಿದರು. ಇಂದಿನಿಂದ  ಆಕ್ಟೋಬರ್ 30 ರವರೆಗೂ ಕನ್ನಡಕ್ಕಾಗಿ ನಾವು ಅಭಿಯಾನ ನಡೆಯಲಿದೆ. ಇಂದು ಮಾತಾಡ್ ಮಾತಾಡ್ ಕನ್ನಡ ಎಂಬ ಶೀರ್ಷಕೆಯಡಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಚಿವರಾದ ಸುನೀಲ್ ಕುಮಾರ್ ಚಾಲನೆ ನೀಡಿದ್ದಾರೆ.

ಕನ್ನಡಕ್ಕಾಗಿ ನಾವು ಅಭಿಯಾನದ ಉದ್ದೇಶ ಕನ್ನಡದಲ್ಲಿ ಮಾತು ಮತ್ತು ಬರವಣಿಗೆ. ಅಕ್ಟೋಬರ್ 30ರ ವರೆಗೂ ಅಭಿಯಾನದ ಕುರಿತ ನಾಟಕ, ನೃತ್ಯ, ಸಂಗೀತ, ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಗಡಿಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ.

Key words: Minister- Sunil Kumar –luanch-kannadakkagi navu- special campaign