Wednesday, August 26, 2026

BDA Apartments

Home Front Page ಬಿಜೆಪಿಯವರು ಪಾಪ ಮುಗ್ದನ ಮೇಲೆ ಆರೋಪ ಮಾಡ್ತಿದ್ದಾರೆ- ಸಚಿವ ಶಿವಲಿಂಗೇಗೌಡ

ಬಿಜೆಪಿಯವರು ಪಾಪ ಮುಗ್ದನ ಮೇಲೆ ಆರೋಪ ಮಾಡ್ತಿದ್ದಾರೆ- ಸಚಿವ ಶಿವಲಿಂಗೇಗೌಡ

ಹಾಸನ ಆಗಸ್ಟ್,26,2026 (www.justkannada.in):  ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆಗೆ ಕುರಿತು ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಕೆ.ಎಂ ಶಿವಲಿಂಗೇಗೌಡ. ಬಿಜೆಪಿಯವರು ಪಾಪ ಮುಗ್ದನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಶಿವಲಿಂಗೇಗೌಡ, ನಾಗೇಂದ್ರ ಅವರು ಮೊದಲು ಆರೋಪ  ಬಂದ ಮೇಲೆ ರಾಜೀನಾಮೆ ಕೊಟ್ಟಿದ್ದರು. ಆದರೆ ತನಿಖಾ ಸಂಸ್ಥೆ ತಪ್ಪಿತಸ್ಥ ಎಂದು ವರದಿ ಕೊಡಬೇಕಲ್ವಾ ಪಶ್ಚಿಮ ಬಂಗಾಳದ ಸಿಎಂ ವಿರುದ್ದ ಆರೋಪ ಇಲ್ವಾ?    ಎಷ್ಟು ಜನರ ಮೇಲೆ ಆರೋಪ ಇಲ್ಲ. ಪಾಪ ಮುಗ್ಧನ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿಯವರು ಪಾದಯಾತ್ರೆ ಮಾಡಲಿ ಒಳ್ಳೆಯದು.  ಜನ ಬುದ್ದಿವಂತರಿದ್ದಾರೆ ಸತ್ಯ ಅಗತ್ಯಗಳನ್ನ ನಿರ್ಧರಿಸುತ್ತಾರೆ  ಎಂದು ಸಚಿವ ಕೆಎಂ ಶಿವಲಿಂಗೇಗೌಡ ತಿಳಿಸಿದರು.

Key words: BJP,  allegations, against, innocent B.Nagendra, Minister, Shivalingegowda