ಮೇಲ್ನೋಟಕ್ಕೆ  ಸಿಎಂ ರಾಜೀನಾಮೆ ಕೊಡುವ ಸ್ಥಿತಿ ಕಾಣುತ್ತಿದೆ- ಸಚಿವ ಸತೀಶ್ ಜಾರಕಿಹೊಳಿ

ನವದೆಹಲಿ,ಮೇ,27,2026 (www.justkannada.in): ಮೇಲ್ನೋಟಕ್ಕೆ  ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಕಾಣುತ್ತಿದೆ  ಎದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ನಾಳೆ ಸಿಎಂ ಸಿದ್ದರಾಮಯ್ಯ ಉಪಹಾರಕ್ಕೆ ಆಹ್ವಾನಿಸಿದ್ದಾರೆ.  ಏನು ಅಂತಾ ನಾಳೆ ಗೊತ್ತಾಗಲಿದೆ. ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಇನ್ನೂ ಏನೂ ಹೇಳಿಲ್ಲ. ನಾಳೆ ಬೆಳಿಗ್ಗೆ ನಾನು ಉಪಹಾರಕೂಟದಲ್ಲಿ ಭಾಗಿಯಾಗುತ್ತೇನೆ.  ನಾನು ಇನ್ನೂ ಸಿಎಂ ಜೊತೆಗೆ ವೈಯಕ್ತಿಕವಾಗಿ ಮಾತನಾಡಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಇದೆ.  ಈ ವಿಚಾರವಾಗಿ ನನ್ನ ಬಳಿ ಯಾರೂ ಕೂಡ ಮಾತನಾಡಿಲ್ಲ ಈ ಬಗ್ಗೆ ಮಾತನಾಡಿದರೇ ನಮ್ಮ ಅಭಿಪ್ರಾಯಗಳನ್ನ ಹೇಳುತ್ತೇನೆ. ಕೆಪಿಸಿಸಿ ಜೊತೆಗೆ ಮಂತ್ರಿಸ್ಥಾನ ಪಡೆಯುವ ಬಗ್ಗೆ ಚರ್ಚೆ ಮಾಡಿಲ್ಲ. ಈ ಹಿಂದೆ ಚರ್ಚೆ ನಡೆದಾಗ ನನ್ನ ಅಭಿಪ್ರಾಯ ತಿಳಸಿದ್ದೆ.  ಡಿಸಿಎಂ ಹುದ್ದೆ ನೀಡುವ ಬಗ್ಗೆ ಗೊತ್ತಿಲ್ಲ.  ಪಕ್ಷದ ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

Key words: CM, resign, Minister, Satish Jarkiholi