Sunday, August 2, 2026

BDA Apartments

Home Front Page ಗುತ್ತಿಗೆದಾರ ಆತ್ಮಹತ್ಯೆ ಕೇಸ್: ಸಮಗ್ರ ತನಿಖೆಗೆ ನಾನೇ ಮನವಿ ಮಾಡುತ್ತೇನೆ- ಸಚಿವ ಪ್ರಿಯಾಂಕ್ ಖರ್ಗೆ

ಗುತ್ತಿಗೆದಾರ ಆತ್ಮಹತ್ಯೆ ಕೇಸ್: ಸಮಗ್ರ ತನಿಖೆಗೆ ನಾನೇ ಮನವಿ ಮಾಡುತ್ತೇನೆ- ಸಚಿವ ಪ್ರಿಯಾಂಕ್ ಖರ್ಗೆ

ಬೆಳಗಾವಿ,ಡಿಸೆಂಬರ್,26,2024 (www.justkannada.in): ಕೊಲೆ ಬೆದರಿಕೆ ಆರೋಪ ಮಾಡಿ ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್  ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ,  ನನಗೂ ಈಗಷ್ಟೆ ವಿಚಾರ ಗೊತ್ತಾಯಿತು.  ಕಾಂಗ್ರೆಸ್ ನವರೆ ಇರಲಿ ನನ್ ಆಪ್ತನೇ ಅಗಿರಲಿ ತನಿಖೆ ಮಾಡಿಸ್ತೇನೆ.  ಅದು ನನ್ನ ಇಲಾಖೆಗೆ ಬರುತ್ತೆ ಇಲಾಖೆ ತನಿಖೆ ಸಹ ಮಾಡಿಸುತ್ತೇನೆ.  ನಾನು ಯಾವುದೇ ಮುಚ್ಚುಮರೆ ಮಾಡಲ್ಲ  ಸಮಗ್ರ ತನಿಖೆಯಾಗಲಿ ಅಂತಾ ಗೃಹಸಚಿವರಿಗೆ ಮನವಿ ಮಾಡುತ್ತೇನೆ.  ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ.  ನನ್ನ ಆಪ್ತ ಅಥವಾ ಯಾರು ಅಂತಾ ಗೊತ್ತಾಗಲಿ ಎಂದು ತಿಳಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಎಂಬುವವರ ವಿರುದ್ದ ಕೊಲೆ ಬೆದರಿಕೆ  ಆರೋಪ ಮಾಡಿ ಗುತ್ತಿಗೆದಾರ ಸಚಿನ್ ಎಂಬುವವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.

Key words:  Contractor, suicide case, Minister, Priyank Kharge