ಸಂಜೆಯೊಳಗೆ ಖಾತೆ ಹಂಚಿಕೆ ಮಾಡ್ತೇವೆ ಎಂದಿದ್ದಾರೆ – ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,4,2026 (www.justkannada.in):  ನೂತನ ಸಚಿವರಿಗೆ ಸಂಜೆಯೊಳಗೆ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಿಗೆ ಅಧಿಕೃತವಾಗಿ ಯಾವುದೇ ಖಾತೆ ಹಂಚಿಕೆಯಾಗಿಲ್ಲ. ಸಿಎಂ ಸಂಜೊಯೊಳಗೆ ಖಾತೆ ಹಂಚಿಕೆ ಮಾಡುತ್ತೇವೆ ಎಂದಿದ್ದಾರೆ ಜವಾಬ್ದಾರಿ ಕೊಟ್ಟರೆ ಯಾರೇ ಆದರೂ ಸಹ ನಿಭಾಯಿಸಬೇಕು.  ಪಕ್ಷ ಅಥವಾ ಸರ್ಕಾರ ಏನೇ ಜವಾಬ್ದಾರಿ ಇದ್ದರೂ ನಿಭಾಯಿಸಬೇಕು ಜನರ ಸೇವೆ ಮಾಡಬೇಕಾದರೆ ಯಾವ ಸ್ಥಾನವೂ ಚಿಕ್ಕದು ಅಲ್ಲ ಎಂದರು.

ಪ್ರಿಯಾಂಕ್ ಖರ್ಗೆ ಗೃಹ ಖಾತೆ ನೀಡುತ್ತಾರೆ ಎಂಬ ವಿಚಾರ,  ಕಾನೂನು ಮತ್ತು ಸಂವಿಧಾನ ಬಿಟ್ಟು ಏನು ಮಾಡೋಕೆ ಆಗಲ್ಲ  ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words: Minister, Priyank Kharge, department, allocation, evening