Wednesday, September 2, 2026

BDA Apartments

Home Front Page ಒಳ ಮೀಸಲಾತಿ: ಸಿಎಂ ಅಧಿಕೃತ ಘೋಷಣೆ ಮಾಡುವವರೆಗೂ ಏನನ್ನೂ ಹೇಳಲ್ಲ-ಸಚಿವ ಕೆಎಚ್ ಮುನಿಯಪ್ಪ

ಒಳ ಮೀಸಲಾತಿ: ಸಿಎಂ ಅಧಿಕೃತ ಘೋಷಣೆ ಮಾಡುವವರೆಗೂ ಏನನ್ನೂ ಹೇಳಲ್ಲ-ಸಚಿವ ಕೆಎಚ್ ಮುನಿಯಪ್ಪ

ಬೆಂಗಳೂರು,ಆಗಸ್ಟ್,20,2025 (www.justkannada.in):  ದಲಿತ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಿದ್ದು ಈ ಕುರಿತು ಇಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿಲಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ಅವರವರ ಜನಸಂಖ್ಯೆ  ಆಧಾರದ ಮೇಲೆ ಮೀಸಲಾತಿ ನಿಗದಿ ಆಗಿದೆ. ಹೋರಾಟ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಅಧಿಕೃತವಾಗಿ  ಘೋಷಣೆ ಮಾಡುವವರೆಗೆ ಏನನ್ನೂ ಹೇಳಲ್ಲ ಎಂದರು.

35 ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನಾಗಮೋಹನ್ ದಾಸ್  ಒಳ್ಳೆಯ ಸಮೀಕ್ಷೆ ಮಾಡಿದ್ದಾರೆ ಅವರಿಗೂ ಧನ್ಯವಾದ ಹೇಳುತ್ತೇನೆ.  ಅಲೆಮಾರಿ ಸಮುದಾಯಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Key words: Internal reservation,  CM, official, announcement, Minister,  KH Muniyappa