Sunday, August 2, 2026

BDA Apartments

Home Front Page ಗ್ಯಾಸ್ ಸಿಲಿಂಡರ್ ಅಭಾವ: ಗ್ರಾಹಕರು ಹೆಚ್ಚು ಹೆಚ್ಚು ಬುಕ್ ಮಾಡಬೇಡಿ – ಸಚಿವ ಕೆ.ಎಚ್ ಮುನಿಯಪ್ಪ.

ಗ್ಯಾಸ್ ಸಿಲಿಂಡರ್ ಅಭಾವ: ಗ್ರಾಹಕರು ಹೆಚ್ಚು ಹೆಚ್ಚು ಬುಕ್ ಮಾಡಬೇಡಿ – ಸಚಿವ ಕೆ.ಎಚ್ ಮುನಿಯಪ್ಪ.

ಬೆಂಗಳೂರು,ಮಾರ್ಚ್,16,2026 (www.justkannada.in): ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವವಿದೆ. ಪರಿಸ್ಥಿತಿ ಗಂಭೀರವಾಗಿದ್ದು, ಜನರಿಗೆ ತೊಂದರೆಯಾಗಿದೆ. ಗ್ರಾಹಕರು ಹೆಚ್ಚು ಹೆಚ್ಚು ಗ್ಯಾಸ್ ಬುಕ್ ಮಾಡಬೇಡಿ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮನವಿ ಮಾಡಿದರು.

ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಗ್ಯಾಸ್ ಅಭಾವ ಹಿನ್ನೆಲೆಯಲ್ಲಿ ಸಿಎಂ ಕೇಂದ್ರಕ್ಕೆ ಎರಡನೇ ಪತ್ರ ಬರೆಯುತ್ತಿದ್ದಾರೆ ಪರಿಸ್ಥಿತಿ ಗಂಭೀರವಾಗಿದೆ  ಕೇಂದ್ರ ಈ ಬಗ್ಗೆ ಗಮನಹರಿಸಬೇಕೆಂದು ಪತ್ರ ಬರೆಯುತ್ತಿದ್ದಾರೆ. ಆಸ್ಪತ್ರೆಗಳು ಶಿಕ್ಷಣ ಸಂಸ್ಥೆಗಳಿಗೆ ರೈಲ್ವೆ ಕ್ಯಾಂಟಿನ್  ಗೆ 100 % ಕಮರ್ಷಿಯಲ್ ಸಿಲಿಂಡರ್ ಪೂರೈಸುತ್ತೇವೆ ಎಂದರು.

ರಾಝ್ಯದಲ್ಲಿ ನಿತ್ಯ 44 ಸಾವಿರ ವಾಣಿಜ್ಯ ಸಿಲಿಂಡರ್ ಬೇಕು. ನಮಗೆ 9 ಸಾವಿರ ಕಮರ್ಷಿಯಲ್ ಸಿಲಿಂಡರ್ ಸಿಗುತ್ತೆ ಈ ಪೈಕಿ 4 ಸಾವಿರ ಆಸ್ಪತ್ರೆಗೆ ಹೋಗುತ್ತೆ. ಹೋಟೆಲ್ ಗಳೀಗೆ ನಿತ್ಯ 1000 ಸಿಲಿಂಡರ್ ಪೂರೈಸುತ್ತೇವೆ. ಆಟೋಗಳಿಗೆ 2500 ಗ್ಯಾಸ್ ಸಿಲಿಂಡರ್  ನೀಡಲು ನಿರ್ಧಾರ ಮಾಡಲಾಗಿದೆ.   ಗ್ರಾಹಕರು ಹೆಚ್ಚಾಗಿ ಸಿಲಿಂಡರ್ ಗಳನ್ನ ಬುಕ್ ಮಾಡಬಾರದು ಎಂದು ಸಚಿವ ಕೆ.ಎಚ್ ಮುನಿಯಪ್ಪ ಮನವಿ ಮಾಡಿದರು.

Key words: Gas cylinder, shortage, Customers, Minister, K.H. Muniyappa.