Friday, September 11, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ಈಗ ಸೈಲೆಂಟ್ ಆಗಿರಬಹುದು, ಸಮಯ ಬಂದಾಗ ಮಾತಾಡ್ತಾರೆ – ಸಚಿವ ಜಮೀರ್

ಸಿಎಂ ಸಿದ್ದರಾಮಯ್ಯ ಈಗ ಸೈಲೆಂಟ್ ಆಗಿರಬಹುದು, ಸಮಯ ಬಂದಾಗ ಮಾತಾಡ್ತಾರೆ – ಸಚಿವ ಜಮೀರ್

ಬೆಂಗಳೂರು,ಏಪ್ರಿಲ್,21,2026 (www.justkannada.in):  ಸಿಎಂ ಸಿದ್ದರಾಮಯ್ಯ ಅವರ ಆಪ್ತರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದು ಸೈಲೆಂಟ್ ಆಗಿದ್ದಾರೆ ಎಂಬ ಹೇಳಿಕೆ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಸಿದ್ದರಾಮಯ್ಯ ಈಗ ಸೈಲೆಂಟ್ ಆಗಿರಬಹುದು, ಆದರೆಸಮಯ ಬಂದಾಗ ಮಾತಾಡುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಮುಸ್ಲೀಂ ಮುಖಂಡರ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಮೀರ್,  ಪತ್ರ ಬರೆದಿದ್ದನ್ನ ನಾನೂ ಕೂಡ ಮಾಧ್ಯಮದಲ್ಲಿ ನೋಡಿದ್ದೇನೆ. ಪತ್ರದ ಬಗ್ಗೆ ಅವರನ್ನೇ ಕೇಳಿ.  ಪ್ರೊಸೀಜರ್ ಪ್ರಕಾರ ಕ್ರಮ ಆಗಬೇಕಿತ್ತು ಎಂದು ಸತೀಶ್ ಹೇಳಿದ್ದು. ನೋಟಿಸ್ ನೀಡಿ ಅಭಿಪ್ರಾಯ ಪಡೆದು ಕ್ರಮ ಆಗಬೇಕಿತ್ತು ಇದು ಎಲ್ಲರ ಅಭಿಪ್ರಾಯ ಎಂದರು.

ಮುಸ್ಲೀಮ ಧರ್ಮಗುರುಗಳು ಅಸಮಾಧಾನಗೊಂಡಿರುವುದು ನಿಜ. ನಾವು ಅವರ ಜೊತೆ ಮಾತನಾಡುತ್ತೇವೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ದಾಖಲೆ ಕೊಡಬೇಕಲ್ವಾ ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಹೇಳಬೇಕು ಅಲ್ವಾ ಎಂದು ಪ್ರಶ್ನಿಸಿದರು.

ಜೆಡಿಎಸ್ ಸೇರುತ್ತೇನೆ ಎಂಬುದು ಊಹಾಪೋಹ ಸುದ್ದಿ. ಕಾಂಗ್ರೆಸ್ ನನಗೇನು ಕಡಿಮೆ ಮಾಡಿದೆ. ಹೆಚ್ ಡಿಕೆ ಜೊತೆ ನಾನ್ಯಾಕೆ ಮಾತನಾಡಲಿ ಎಂದರು.

Key words: CM Siddaramaiah, silent, speak, Minister, Jameer Ahmed Khan