ಚು.ಆಯೋಗ ಸಂಶಯಾಸ್ಪದ ರೀತಿ ನಡೆದುಕೊಂಡಿದೆ: ವಿಶ್ವಾಸ, ನಂಬಿಕೆ ಇಲ್ಲ- ಸಚಿವ ದಿನೇಶ್ ಗುಂಡೂರಾವ್

ಮಂಗಳೂರು,ಮೇ,22,2026 (www.justkannada.in): ಕರ್ನಾಟಕದಲ್ಲಿ ಎಸ್ ಐಆರ್ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಚುನಾವಣಾ ಆಯೋಗ ಸಂಶಯಾಸ್ಪದ ರೀತಿಯಲ್ಲಿ ನಡೆದುಕೊಂಡಿದೆ.  ವಿರೋಧ ಪಕ್ಷಗಳಿಗೆ  ಆಯೋಗದ ಮೇಲೆ ವಿಶ್ವಾಸ ನಂಬಿಕೆ ಇಲ್ಲ ದೇಶದಲ್ಲಿ ಆಯೋಗದ ಬಗ್ಗೆ ಯಾರು ಸಹ ಸಂಶಯ ಪಡುತ್ತಿರಲಿಲ್ಲ. ಚುನಾವಣೆ ಗೆಲ್ಲಲು ಏನು ಮಾಡಬೇಕು ಅದನ್ನ ಬಿಜೆಪಿ ಮಾಡುತ್ತಿದೆ  ಎಂದು ಆರೋಪಿಸಿದರು.

ಪಂಜಾಬ್ ಚುನಾವಣೆ ಹಿನ್ನೆಲೆ ಇಡಿ ಐಟಿಯವರು ದಾಳಿ ಮಾಡುತ್ತಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕಕ್ಕೆ ಬರುತ್ತಾರೆ ಎಂದು  ಸಚಿವ ದಿನೇಶ ಗುಂಡೂರಾವ್ ವ್ಯಂಗ್ಯವಾಡಿದರು.

Key words: Election Commission, suspiciously, no confidence, Minister, Dinesh Gundu Rao