28 ಕ್ಷೇತ್ರಗಳಲ್ಲೂ ಮೋದಿ ಅಲೆ: ಬಿಜೆಪಿ ವಿಜಯಪತಾಕೆ ಹಾರಿಸಬೇಕು- ಬಿವೈ ವಿಜಯೇಂದ್ರ.

ಬೆಂಗಳೂರು,ಮಾರ್ಚ್,23,2024(www.justkannada.in):  ಲೋಕಸಭೆ ಚುನಾವಣೆಗೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು ಈ ನಡುವೆ ರಾಜ್ಯದ  28 ಕ್ಷೇತ್ರಗಳಲ್ಲೂ  ಪ್ರಧಾನಿ ನರೇಂದ್ರ ಮೋದಿ ಅಲೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿರುವ ಭಂಡಾಯ ಶಮನವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿಜಯಪತಾಕೆ  ಹಾರಿಸಬೇಕಿದೆ.  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಹಮತ ಬರಬೇಕು ಆ ನಿಟ್ಟಿನಲ್ಲಿ ವರಿಷ್ಠರು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದಾರೆ. ಪಕ್ಷದ ಭವಿಷ್ಯದ ದೃಷ್ಠಿಯಿಂದ ಕೆಲಸ ಮಾಡಬೇಕಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

Key words: lokasabha-election-Modi -wave – 28 constituencies-BY Vijayendra.